News Karnataka Kannada
Tuesday, May 07 2024
ಮಹಾರಾಷ್ಟ್ರ

ಬೇಟೆಗೆ ಬಂದ ಚಿರತೆಯನ್ನು ಮೆಲ್ಲಗೆ ಕೂಡಿ ಹಾಕಿದ ಬಾಲಕ

Mh
Photo Credit : News Kannada

ಮುಂಬೈ: ಬೇಟೆಯನ್ನು ಹುಡುಕಿಕೊಂಡು ಬಂದ ಚಿರತೆಯನ್ನು ಆಫೀಸ್​ನಲ್ಲಿ ಬಾಲಕನೊಬ್ಬ ಅತ್ಯಂತ ತಾಳ್ಮೆಯಿಂದ, ಸ್ಮಾರ್ಟ್​ ಆಗಿ ಕೂಡಿ ಹಾಕಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಮಾಲೆಗಾಂವ್​ನಲ್ಲಿ ನಡೆದಿದೆ.

ಕಲ್ಯಾಣ ಮಂಟಪದ ಸೆಕ್ಯೂರಿಟಿ ಗಾರ್ಡ್​ವೊಬ್ಬರ ಮಗ ಮೋಹಿತ್ ಅಹಿರೆ (12) ಚಾಣಕ್ಷತೆಯಿಂದ ಚಿರತೆಯನ್ನು ಕೂಡಿ ಹಾಕಿದ್ದಾನೆ. ತಂದೆ ಹೊರ ಹೋದ ಸಮಯದಲ್ಲಿ ಆಫೀಸ್​ನ ಬಾಗಿಲಿನ ಬಳಿಯಿದ್ದ ಸೋಫಾದಲ್ಲಿ ಮೊಬೈಲ್​ನಲ್ಲಿ ಗೇಮ್​ ಆಡಿಕೊಂಡು ಕುಳಿತಿರುತ್ತಾನೆ.

ಅದೇ ವೇಳೆ ಅಲ್ಲಿಗೆ ಬೇಟೆ ಹುಡುಕಿಕೊಂಡು ಚಿರತೆ ಬಂದು ಆಫೀಸ್​ನೊಳಗೆ ಹೋಗಿದೆ. ಆದರೆ ಬಾಗಿಲು ಬಳಿ ಸೋಫಾದಲ್ಲಿ ಕುಳಿತ್ತಿದ್ದ ಬಾಲಕನನ್ನು ಗಮನಿಸದೇ ಚಿರತೆ ಒಳ ಹೋಗಿದೆ. ಆದರೆ ಈ ವೇಳೆ ಯಾವುದೇ ಕೂಗದೇ, ಗಲಾಟೆ ಮಾಡದೇ ಕುಳಿತಲ್ಲಿಂದ ಸೈಲೆಂಟ್ ಆಗಿ ಎದ್ದ ಬಾಲಕ ತಕ್ಷಣ ಬಾಗಿಲನ್ನು ಮುಚ್ಚಿದ್ದಾನೆ.

ಬಾಗಿಲು ಹಾಕಿದ ತಕ್ಷಣ ಬಾಲಕ ಸ್ಥಳೀಯರಿಗೆ ಈ ವಿಚಾರ ತಿಳಿಸಿದ್ದಾನೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಚಿರತೆಯನ್ನು ಕೂಡಿ ಹಾಕಿದ ಬಾಲಕನ ಚಾಣಕ್ಷತೆಯ ದೃಶ್ಯ ಆಫೀಸ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರೆಲ್ಲ ಬಾಲಕನ ಕೆಲಸಕ್ಕೆ ಸೆಲ್ಯೂಟ್ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು