ಮಹಾರಾಷ್ಟ್ರ : ತಾನು ಹೇಳಿದ ಸಮಯಕ್ಕೆ ಲಸಿಕೆ ನೀಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.
ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ಘಟನೆ ನಡೆಸಿದ್ದು, ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿ ಸರದಿ ಸಾಲನ್ನು ದಾಟಿ ಮುಂದೆ ಹೋಗಿದ್ದಾನೆ.
ಜನರು ಆಕ್ರೋಶಗೊಂಡು ಲೈನ್ನಲ್ಲಿ ಕಾಯುವಂತೆ ಹೇಳಿದ್ದಾರೆ. ಅವರ ಮಾತಿಗೆ ಬಗ್ಗದ ವ್ಯಕ್ತಿ ಸೀದ ಸಿಬ್ಬಂದಿ ಬಳಿ ತೆರಳಿ ಲಸಿಕೆ ಹಾಕುವಂತೆ ಕೇಳಿದ್ದಾನೆ.
ಸಿಬ್ಬಂದಿ ಸರತಿ ಸಾಲಿನಲ್ಲಿ ಬರುವಂತೆ ತಿಳಿಸಿ, ಲಸಿಕೆ ಹಾಕಲು ನಿರಾಕರಿಸಿದ್ದಕ್ಕೆ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಮನೋಹರ್ ರಾಥೋಡ್ನನ್ನು ಪೊಲೀಸರು ಬಂಧಿಸಿದ್ದಾರೆ. ಡಾ. ಸಂತೋಷ್ ಜಾಧವ್ ಅವರಿಗೆ ಅದೃಷ್ಟವಶಾತ್ ಯಾವುದೇ ಗಾಯ ಆಗಿಲ್ಲ, ಕೊಡಲಿ ಪೆಟ್ಟಿನಿಂದ ಅವರು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡಿದ್ದಾರೆ.