ಪುಣೆ : ‘ಅನಾಥ ಮಕ್ಕಳ ತಾಯಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಖ್ಯಾತ ಸಮಾಜ ಸೇವಕಿ ಸಿಂಧೂತಾಯಿ ಸಪ್ಕಾಲ್ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಇಂದು ತಿಳಿಸಿದ್ದಾರೆ.
ಕಳೆದ ವರ್ಷ ಪದ್ಮಶ್ರೀ ಪಡೆದಿದ್ದ ಸಪ್ಕಾಲ್ ಅವರು 73 ನೇ ವಯಸ್ಸಿನಲ್ಲಿ ನಿಧನರಾದರು. ಕಡು ಬಡತನದಲ್ಲಿ ಬೆಳೆದು ತನ್ನ ಆರಂಭಿಕ ವರ್ಷಗಳಲ್ಲಿ ಅಪಾರ ಕಷ್ಟಗಳನ್ನು ಅನುಭವಿಸಿದ್ದ ಸಪ್ಕಾಲ್ ಅವರು ಅನಾಥ ಮಕ್ಕಳಿಗಾಗಿ ಸ್ಥಾಪಿಸಿದ ಹಲವಾರು ಸಂಸ್ಥೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ.
ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಗ್ಯಾಲಕ್ಸಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಕೆ ಬಹಳ ನಿಧಾನವಾಗಿತ್ತು, ಇಂದು ರಾತ್ರಿ 8 ಗಂಟೆ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್ ಪುಂಟಂಬೆಕರ್ ತಿಳಿಸಿದ್ದಾರೆ.
ನವೆಂಬರ್ 14, 1948 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಪ್ಕಾಲ್ 4 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಲೆಯನ್ನು ಬಿಡಬೇಕಾಯಿತು.
12 ನೇ ವಯಸ್ಸಿನಲ್ಲಿ, ಅವರನ್ನು 32 ವರ್ಷದ ವ್ಯಕ್ತಿಗೆ ಮದುವೆ ಮಾಡಿ ಕೊಡಲಾಗಿತ್ತು. ಅವರು ಮೂರು ಮಕ್ಕಳಿಗೆ ಜನ್ಮ ನೀಡಿದ ನಂತರ, ಗರ್ಭಿಣಿಯಾಗಿದ್ದಾಗ ವೇಳೆ ಪತಿ ಆಕೆಯನ್ನು ತೊರೆದಿದ್ದ. ಒಂದು ಹಂತದಲ್ಲಿ, ಅವಳ ಸ್ವಂತ ತಾಯಿ ಮತ್ತು ಅವಳು ಬೆಳೆದ ಹಳ್ಳಿಯ ಜನತೆ ಅವಳ ಕಷ್ಟದಲ್ಲಿ ಸಹಾಯ ಮಾಡಲು ನಿರಾಕರಿಸಿದ್ದರಿಂದ, ಸಪ್ಕಾಲ್ ತನ್ನ ಹೆಣ್ಣು ಮಕ್ಕಳನ್ನು ಬೆಳೆಸಲು ಭಿಕ್ಷಾಟನೆಯನ್ನು ಆಶ್ರಯಿಸಬೇಕಾಯಿತು.
ಆದಾಗ್ಯೂ, ಈ ಸಂದರ್ಭಗಳನ್ನು ನಿವಾರಿಸಿ, ಅವರು ಶೀಘ್ರದಲ್ಲೇ ಅನಾಥರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1,050 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಬೆಳೆಸಿರುವ ಅವರು 207 ಅಳಿಯಂದಿರು ಮತ್ತು 36 ಸೊಸೆಯರನ್ನು ಹೊಂದಿದ್ದಾರೆ ಎಂದು ಹೆಮ್ಮೆಪಡುತ್ತಾರೆ.
ಪದ್ಮ ಪ್ರಶಸ್ತಿಯ ಜೊತೆಗೆ, ಸಪ್ಕಲ್ ತನ್ನ ಜೀವಿತಾವಧಿಯಲ್ಲಿ 750 ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಪ್ರಶಸ್ತಿಯ ಹಣವನ್ನು ಅನಾಥ ಮಕ್ಕಳಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸಲು ಬಳಸಿದ್ದಾರೆ.