ಜೈಪುರ: ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದು ಬೀಗಿದೆ. ಈಗ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಬಲ್ಮುಕುಂದ್ ಆಚಾರ್ಯ ರಸ್ತೆಬದಿಯಲ್ಲಿ ಅನಧಿಕೃತವಾಗಿ ನಾನ್ ವೆಜ್ ಮಾರುವ ಗಾಡಿಗಳನ್ನು, ಅಂಗಡಿಗಳನ್ನು ತೆಗೆದುಹಾಕುವಂತೆ ಆದೇಶಿಸಿದ್ದಾರೆ.
ಹವಾಮಹಲ್ನಿಂದ ವಿಧಾನಸಭೆಗೆ ಗೆಲುವು ಸಾಧಿಸಿದ ಬಳಿಕ ಬಲ್ಮುಕುಂದ್ ಆಚಾರ್ಯ ಇಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು.
ಈ ವೇಳೆ ಅವರ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಪ್ರವಾಸದ ವೇಳೆ ಮಾಂಸಾಹಾರಿ ಗಾಡಿಗಳ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಆಡಳಿತಾಧಿಕಾರಿಗಳನ್ನು ಕರೆಸಿ ಸಂಜೆ ವೇಳೆಗೆ ರಸ್ತೆ ಬದಿ ಹಾಕಿರುವ ಅನಧಿಕೃತ ಮಾಂಸಾಹಾರಿ ಗಾಡಿಗಳನ್ನು ತೆಗೆಯುವಂತೆ ಆದೇಶಿಸಿದರು. ಸಂಜೆಯ ವೇಳೆಗೆ ಒಂದೇ ಒಂದು ನಾನ್ ವೆಜ್ ಸ್ಟಾಲ್ ಕೂಡ ಇರಬಾರದು ಎಂದರು. ಅಲ್ಲದೆ ಈ ಸಂಪೂರ್ಣ ಪ್ರಕರಣದ ವರದಿಯನ್ನೂ ಶಾಸಕರು ಕೇಳಿದ್ದಾರೆ. ಈ ವೀಡಿಯೋವನ್ನುಕೇಂದ್ರ ಗೃಹ ಸಚಿವ ಅಮಿತ್ ಶಾ ಹಂಚಿಕೊಂಡಿದ್ದಾರೆ.
How your vote to the right man matters
pic.twitter.com/JNiozkjdde— ExtraSpiceAni (@ShrivastavAni) December 4, 2023