ಭೋಪಾಲ್: ಮನುಷ್ಯನ ವಿಕೃತಿ ಎಂದೂ ಕೊನೆಗೊಳ್ಳಲ್ಲ ಎಂಬುವುದಕ್ಕೆ ಈ ದುಷ್ಕೃತ್ಯವೇ ಸಾಕ್ಷಿ. ಹೌದು. . ಈ ಮಾತಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮುದ್ದಾದ ನಾಯಿಮರಿ ಸಾವಿಗೆ ಯಮನಾಗಿದ್ದಾನೆ. ಆ ನಾಯಿ ಮರಿಯನ್ನು ಕೈಯಿಂದ ರಸ್ತೆಗೆ ಎಸೆದ ಬಳಿಕ ಕಾಲಿನಿಂದ ತುಳಿದು ಹತ್ಯೆ ಮಾಡಿದ್ದಾನೆ.
ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿ ಕುಳಿತಿರುತ್ತಾನೆ. ಈ ವೇಳೆ ಎರಡು ಮುದ್ದಾದ ನಾಯಿಮರಿಗಳು ಆಡುತ್ತಾ ಬಂದು ಆ ಕುಳಿತ್ತಿದ್ದ ವ್ಯಕ್ತಿ ಬಳಿ ಆಟವಾಡಲು ಮುಂದಾಗುತ್ತಾವೆ. ಆಗ ಇದ್ದಕ್ಕೀದ್ದಾಗೆ ಕೋಪಗೊಂಡ ಪಾಪಿ ಒಂದು ನಾಯಿಮರಿಯನ್ನು ಕೈಯಿಂದ ಎತ್ತಿ ಜೋರಾಗಿ ರಸ್ತೆಗೆ ಎಸೆಯುತ್ತಾನೆ. ಬಳಿಕ ತುಳಿದು ಸಾಯಿಸಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋ ನೋಡಿ ಸ್ವತಹ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಣ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಕೂಡ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.
Deeply disturbed by the horrifying incident. Swift and strict action will be taken to ensure justice is served. We unequivocally condemn such acts of barbarism, and the individual responsible will face the consequences. https://t.co/yYdCyKli64
— Shivraj Singh Chouhan (मोदी का परिवार ) (@ChouhanShivraj) December 10, 2023