ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಓಂಕಾರೇಶ್ವರದಲ್ಲಿ ‘ಆದಿ ಶಂಕರಾಚಾರ್ಯ’ ಅವರ 108 ಅಡಿ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅದ್ವೈತ ವೇದಾಂತದ ಸಿದ್ಧಾಂತ ಪ್ರತಿಪಾದಕ ಆದಿ ಶಂಕರಾಚಾರ್ಯರ ಬಹು-ಲೋಹ ‘ಏಕಾತ್ಮತಾ ಕಿ ಪ್ರತಿಮಾ’ (ಏಕತ್ವದ ಪ್ರತಿಮೆ) ಏಕಾತ್ಮ ಧಾಮ್ ಯೋಜನೆಯ ಮೊದಲ ಹಂತವಾಗಿದೆ.
ಮುಂದೆ ಅದ್ವೈತ ಲೋಕ ವಸ್ತುಸಂಗ್ರಹಾಲಯ ನಿರ್ಮಾಣವೂ ಯೋಜನೆಯಲ್ಲಿದೆ. ಅಲ್ಲದೆ ಆಚಾರ್ಯರ ತತ್ವ ಸಿದ್ದಾಂತಗಳನ್ನು ಪ್ರಚಾರ ಮಾಡುವ ಯೋಜನೆಯೂ ಇದೆ.
‘ಏಕತ್ವದ ಪ್ರತಿಮೆ’ ಅನಾವರಣಕ್ಕೂ ಮುನ್ನ, ಮಾಂಧಾತ ಪರ್ವತದಲ್ಲಿ ಪ್ರಸ್ಥಾನತ್ರಯ ಭಾಷ್ಯ ಪಾರಾಯಣ ಮತ್ತು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ದೇಶದ ಸುಮಾರು 300 ಪ್ರಸಿದ್ಧ ‘ವೈದಿಕ ಅರ್ಚಕ’ರಿಂದ ವೈದಿಕ ಧಾರ್ಮಿಕ ಪೂಜೆ ನಡೆಯಿತು.