ಭೋಪಾಲ್: ‘ರಾಷ್ಟ್ರೀಯ ಸ್ವಯಂಸೇವಕರ ಸಂಘ (ಆರೆಸ್ಸೆಸ್) ಯಾರಿಗೂ ಸ್ಪರ್ಧಿ ಅಲ್ಲ. ಆದರೆ, ಧರ್ಮ ತನ್ನ ವರ್ತನೆಯಿಂದ ಕಾಪಾಡಲ್ಪಡುತ್ತದೆ. ನಮ್ಮ ಸದ್ಗುಣಗಳು ಮತ್ತು ಧರ್ಮವೇ ನಮ್ಮ ಸಂಪತ್ತು ಹಾಗೂ ಅಸ್ತ್ರವಾಗಿವೆ’ ಎಂದು ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಆರೆಸ್ಸೆಸ್ನ ‘ಪ್ರಜ್ಞಾ ಪ್ರವಾಹ’ ಇಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಅಖಿಲ ಭಾರತೀಯ ಚಿಂತನ್ ಬೈಠಕ್’ನ ಸಮಾರೋಪದಲ್ಲಿ ಮಾತನಾಡಿದ ಅವರು, ‘ಸತ್ಯ, ದಯೆ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಎಲ್ಲಾ ಭಾರತೀಯ ಧರ್ಮಗಳ ಮೂಲ ಗುಣಗಳು ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಹಲವಾರು ಸಂಸ್ಥೆಗಳ ಸಹಭಾಗಿ ಆಗಿದೆ’ ಎಂದರು.
ಹಲವಾರು ವಿಶ್ವವಿದ್ಯಾಲಯಗಳ ಕುಲಪತಿಗಳು, ಖ್ಯಾತ ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಣ ಕ್ಷೇತ್ರದ ಹಲವು ಗಣ್ಯರು, ಚಿಂತಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.