ಮಧ್ಯಪ್ರದೇಶ : ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಹಸಿವು ತಾಳಲಾರದೇ ಹಣ ಕೇಳಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಕತ್ತು ಹಿಸುಕಿ ಕೊಂಡಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ರಥಯಾತ್ರೆ ನಡೆಯುತ್ತಿತ್ತು. ಹೀಗಾಗಿ ಇಲ್ಲಿಗೆ ನಿಯೋಜನೆ ಮೇರೆಗೆ ಪೊಲೀಸರನ್ನು ಕಳಿಹಿಸಲಾಗಿತ್ತು. ಈ ವೇಳೆ ಹಸಿವಿನಿಂದ ಬಾಲಕನೊಬ್ಬ ಆಹಾರ ಖರೀದಿಸಲು ಆರು ವರ್ಷದ ಬಾಲಕ ಪದೇ ಪದೇ ಹಣ ಕೇಳಿದ್ದಾನೆ. ಇದರಿಂದ ಕೋಪಗೊಂಡ ರವಿ ಶರ್ಮಾ ಎಂಬ ಪೊಲೀಸ್ ಕಾನ್ಸ್ಟೇಬಲ್ ಬಾಲಕನ ಕತ್ತು ಹಿಸುಕಿ ಕೊಂದಿದ್ದಾನೆ. ಕೊಲೆ ಬಳಿಕ ಬಾಲಕನ ಶವವನ್ನು ಗ್ವಾಲಿಯಾರ್ನ ನಿರ್ಜನ ಪ್ರದೇಶದಲ್ಲಿ ಎಸೆದು ಏನು ಅರಿಯದಂತೆ ಇದ್ದನು. ಇದರ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಕಳೆದ ಹಲವು ತಿಂಗಳಿಂದ ಶರ್ಮಾ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದನಯ ಎನ್ನಲಾಗಿದೆ. ಇದೇ ಗುಂಗಲ್ಲಿದ್ದ ವೇಳೆ ಬಾಲಕ ನಿರಂತರವಾಗಿ ಹಣ ಕೇಳಿದಾಗ ಸಿಟ್ಟಿಗೆದ್ದಿದ್ದಾರೆ. ಕೋಪದಲ್ಲಿ ಬಾಲಕನನ್ನು ಪೊಲೀಸ್ ವಾಹನದ ಹಿಂಬದಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಆ ಶವವನ್ನು ಕಾರಿನ ಮೂಲಕ ಸುಮಾರು 70 ಕಿ.ಮೀ ದೂರದ ಗ್ವಾಲಿಯಾರ್ನ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಎಸ್ಪಿ ರಾಥೋಡ್ ತಿಳಿಸಿದ್ದಾರೆ.