ಮಧ್ಯಪ್ರದೇಶ : ಇಲ್ಲಿದ ಉಜ್ಜಯಿನಿ ಹೊಸ ದಾಖಲೆ ಬರೆದಿದೆ. ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಪ್ರಸಿದ್ಧ ದೇಗಲದ ಆವರಣದಲ್ಲಿ 11. 71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿದೆ. ಮಂಗಳವಾರ ಶಿವಜ್ಯೋತಿ ಅರ್ಪಣಂ ಹಬ್ಬದ ಅಂಗವಾಗಿ ಈ ದೀಪ ಬೆಳಗಿಸಲಾಗಿದ್ದು, ಇಷ್ಟೊಂದು ದೀಪ ಹಚ್ಚಿದ ಈ ಕೆಲಸ ಇದೀಗ ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದೆ.
ಈ ಹಿಂದೆ ಅಯೋಧ್ಯೆಯಲ್ಲಿ 9.41 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿದ ದಾಖಲೆ ಹೊಂದಿತ್ತು. ಈಗ ಆ ದಾಖಲೆಯನ್ನು ಮುರಿಯಲಾಗಿದೆ.
ಮಹಾ ಶಿವರಾತ್ರಿ ಅಂಗವಾಗಿ ಮಂಗಳವಾರ ಸಂಜೆ ರಾಮಘಾಟ್ ಮತ್ತು ದತ್ ಅಖಾರಾ ಘಾಟ್ನಲ್ಲಿ 11, 71, 078 ದೀಪಗಳನ್ನು ಬೆಳಗಿಸಲಾಗಿದೆ. ‘ಶಿವಜ್ಯೋತಿ ಅರ್ಪಣ ಮಹೋತ್ಸವ’ ಕಾರ್ಯದ ಮೂಲಕ ಈ ದೀಪ ಹಚ್ಚಲಾಗಿದ್ದು, ಸ್ಥಳೀಯ ಜನರು ಕೂಡ ಇದರಲ್ಲಿ ಭಾಗಿಯಾಗಿದ್ದರು.
ಇನ್ನು ಇಷ್ಟು ಮಟ್ಟದ ದೀಪ ಹಚ್ಚಲು ಮುಂದಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ವಿಶ್ವ ದಾಖಲೆಯ ಪುಟಕ್ಕೆ ಸೇರುವ ಮುನ್ನ ನಡೆಸುವ ಪರಿಸ್ಥಿತಿ ಗಮನಿಸಲು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಐದು ಸದಸ್ಯರ ತಂಡವನ್ನು ಉಜ್ಜಯಿನಿಗೆ ಕಳುಹಿಸಿತು. ಅದರಂತೆ ಮಂಗಳವಾರ ಸಂಜೆ 6:42 ಕ್ಕೆ ಸೈರನ್ ಕೂಗುತ್ತಿದ್ದಂತೆ ಕಾರ್ಯಕರ್ತರು 10 ನಿಮಿಷದಲ್ಲೇ 11. 71 ಲಕ್ಷ ಮಣ್ಣಿನ ಹಣತೆ ಬೆಳಗಿಸಿ ದಾಖಲೆ ನಿರ್ಮಿಸಿದರು. ಈ ದಾಖಲೆ ಇದೀಗ ಪುರಸ್ಕಾರ ಸಿಕ್ಕಿದೆ. ಈ ಶಿವರಾತ್ರಿ ಕಾರ್ಯಕ್ರಮ ಗಿನ್ನೆಸ್ ದಾಖಲೆ ಸೇರಿದ ಹಿನ್ನಲೆ ತಂಡದ ಸದಸ್ಯರಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ನೀಡಿ, ಅಭಿನಂದಿಸಿದ್ದಾರೆ.
ಇನ್ನು ರಾಜ್ಯ ಸಂಸ್ಕೃತಿ ಇಲಾಖೆ ಸಹಾಯದಿಂದ ಇಷ್ಟು ದೊಡ್ಡ ದೀಪ ಉತ್ಸವ ನಡೆಸಲಾಗಿದೆ. ಮಹಾಕಾಳೇಶ್ವರನ ದೇವರ ಆಶೀರ್ವಾದ ಮತ್ತು ಜನರ ಭಕ್ತಿಯಿಂದ, ಈ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಲು ಸಾಧ್ಯವಾಯಿತು. ಇದು ಒಂದು ಸೌಭಾಗ್ಯ ಎಂದು ಚೌಹಾಣ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕ್ಷಿಪ್ರಾ ನದಿ ಮತ್ತು ರಾಮಘಾಟ್-ದತ್ತಾಖರಾ-ಸುನ್ಹರಿ ಘಾಟ್ನ ದಡದಲ್ಲಿ ದೀಪಗಳನ್ನು ಸಾಲುಗಳಲ್ಲಿ ಜೋಡಿ ಮಂಗಳವಾರ ಸಂಜೆ 6:42 ಕ್ಕೆ ಸೈರನ್ ಮೊಳಗಿದ ನಂತರ 13 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೇವಲ 10 ನಿಮಿಷಗಳ ಅವಧಿಯಲ್ಲಿ 11 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿದರು. ಈ ಕಾರ್ಯದಲ್ಲಿ 17,000 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು . ಅಲ್ಲದೇ ಈ ಕಾರ್ಯಕ್ರಮ ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ಶೂನ್ಯ ತ್ಯಾಜ್ಯ ಗುರಿಯನ್ನು ಸಾಧಿಸಲು ವಿಶೇಷ ಕಾಳಜಿ ವಹಿಸಿತು ಎಂದು ನಗರ ಆಡಳಿತ ಶ್ರಮ ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಇದರ ಹೊರತಾಗಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ 51,000, ಮಂಗಳನಾಥ ದೇವಸ್ಥಾನದಲ್ಲಿ 11,000, ಕಾಲಭೈರವ ದೇವಸ್ಥಾನ ಮತ್ತು ಘಾಟ್ನಲ್ಲಿ 10,000, ಗಡ್ಕಲಿಕಾ ದೇವಸ್ಥಾನದಲ್ಲಿ 1100, ಸಿದ್ಧವತ್ ದೇವಸ್ಥಾನ ಮತ್ತು ಘಾಟ್ನಲ್ಲಿ 6,000 ಮತ್ತು ಹರಸಿದ್ಧಿ ದೇವಸ್ಥಾನದಲ್ಲಿ 5,000 ದೀಪಗಳನ್ನು ಬೆಳಗಿಸಲಾಯಿತು. ಇಡೀ ನಗರವೇ ದೀಪಗಳ ಬೆಳಕಿನಿಂದ ಕಂಗೊಳಿಸಿದೆ.
पुण्य सलिला क्षिप्रा से श्री महाकाल महाराज जी के परिसर तक, अवंतिका नगरी के हर देवालय से गली-चौराहे तक उज्जैन रोशनी से दमक उठी है।
आप सभी ने 11,71,878 दीप प्रज्ज्वलित कर न सिर्फ रिकॉर्ड बनाया, बल्कि पावन अवसर को इतिहास में स्वर्णिम अक्षरों से लिख दिया है। मन आनंदित है। https://t.co/oRalCjCIMe pic.twitter.com/45xn44o4LK
— Shivraj Singh Chouhan (@ChouhanShivraj) March 1, 2022