ಕೊಯಿಕ್ಕೋಡ್: ಕೇರಳದ ಥೊಂಡಾಯಾಡ್ ಬೈಪಾಸ್ನಲ್ಲಿ ಕಾಡು ಹಂದಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸಿದ್ದಿಖ್ (33) ಎಂದು ಗುರುತಿಸಲಾಗಿದೆ.ಬೈಕ್ನಲ್ಲಿ ಹೋಗುವಾಗ ದಿಢೀರನೇ ಎದುರಾದ ಕಾಡು ಹಂದಿ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಯಿತು.
ಇತ್ತ ಡಿಕ್ಕಿಯ ರಭಸಕ್ಕೆ ಬೈಕ್ನಿಂದ ಕೆಳಗೆ ಬಿದ್ದ ಸಿದ್ದಿಖ್ ತಲೆಗೆ ಭಾರೀ ಪೆಟ್ಟಾಗಿತ್ತು. ತಕ್ಷಣ ಆತನನ್ನು ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಥೊಂಡಾಯಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.