News Karnataka Kannada
Monday, May 06 2024
ಕೇರಳ

ಕೇರಳ ಮಳೆ: ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ, ಆರೆಂಜ್ ಅಲರ್ಟ್

Rain
Photo Credit :

 ಕೇರಳ: ಕೇರಳದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಇಡುಕ್ಕಿ ಜಲಾಶಯದಲ್ಲಿನ ನೀರು  ಅಲರ್ಟ್ -ಎಚ್ಚರಿಕೆಯ ಮಟ್ಟಕ್ಕೆ ಸಮೀಪಿಸುತ್ತಿದೆ.

ಏಷ್ಯಾದ ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾದ ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟವು ಸೋಮವಾರ 2,396.96 ಅಡಿಗಳಿಗೆ ಏರಿಕೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಇಡುಕ್ಕಿ ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟ 2,403 ಅಡಿಗಳು.

ಶೋಲಯಾರ್, ಪಂಬಾ, ಕಕ್ಕಿ ಮತ್ತು ಇಡಮಲಯಾರ್ ಸೇರಿದಂತೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಲಿದೆ.

ಪಂಬಾ ಅಣೆಕಟ್ಟಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇಂದು ಮಧ್ಯಾಹ್ನದ ಮೊದಲು ಕಕ್ಕಿ ಅಣೆಕಟ್ಟು ತೆರೆಯಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಚೆಂಕಲ್, ಪೂಜಿಕಾಡ್ ಮುಡಿಯೂರುಕೋಣಂ ಮತ್ತು ಕುಂದಾಂಬಾಳ, ಪಂದಳಂ ಸಮೀಪದ ತಗ್ಗು ಪ್ರದೇಶಗಳು, ಅಚಂಕೋವಿಲ್ ನದಿಯ ತೀರದಲ್ಲಿ ಪ್ರವಾಹ ಉಂಟಾಗಿದೆ.
ಅಚಂಕೋವಿಲ್‌ನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ, ಅರನ್ಮುಲಾ, ಕಿಡಂಗನೂರು ಮತ್ತು ಓಮಲ್ಲೂರು ಪ್ರದೇಶಗಳ ಬಳಿಯಿರುವ ದಂಡೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

ಪತ್ತನಂತಿಟ್ಟ ಜಿಲ್ಲೆಯಲ್ಲಿ ತೆರೆಯಲಾದ ವಿವಿಧ ಪರಿಹಾರ ಶಿಬಿರಗಳಿಗೆ ಜನರನ್ನು ಸ್ಥಳಾಂತರಿಸಲಾಗಿದೆ.
ಏತನ್ಮಧ್ಯೆ, ರಾಜ್ಯ ಸರ್ಕಾರ ಎಡಿಜಿಪಿ ವಿಜಯ್ ಸಖಾರೆ ಅವರನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಯೋಜಿಸಲು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.ತ್ರಿಶೂರ್ ಜಿಲ್ಲಾಧಿಕಾರಿಯಾದ ಹರಿತಾ ವಿ ಕುಮಾರ್ ಅವರು ಶೋಲಾಯಾರ್ ಅಣೆಕಟ್ಟು ಶೀಘ್ರದಲ್ಲಿ ತೆರೆಯಬಹುದಾದ್ದರಿಂದ ನೀರಿನ ಮಟ್ಟ ಏರಿಕೆಯಾಗಬಹುದು ಎಂದು ಚಾಲಕುಡಿ ನದಿಯ ದಡದಲ್ಲಿ ವಾಸಿಸುವ ಸಾರ್ವಜನಿಕರನ್ನು ಜಾಗರೂಕತೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು