ಕೇರಳ : ಕೇರಳದಿಂದ ಅಸ್ಸಾಂಗೆ ಹೊರಟಿದ್ದ ಖಾಸಗಿ ಬಸ್ ಚಾಲಕ ಮತ್ತು ಕ್ಲೀನರ್ ಸೇರಿ ಪ್ರಯಾಣಿಕರನ್ನು ಊಟಕ್ಕೆ ಇಳಿಸಿ, ಬಸ್ ಸಮೇತ ಪರಾರಿಯಾಗಿದ್ದಾರೆ. ಕೇರಳ ಮೂಲದ ಖಾಸಗಿ ಬಸ್ವೊಂದು 64 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು.
ತೆಲಂಗಾಣದ ನಲ್ಗೊಂಡ ಬಳಿ ಊಟಕ್ಕೆ ಇಳಿಸಲಾಗಿತ್ತು. ಎಲ್ಲ ಪ್ರಯಾಣಿಕರು ತಮ್ಮ ಲಗೇಜ್ ಬಿಟ್ಟು ಊಟಕ್ಕೆಂದು ಇಳಿದಿದ್ದು, ಚಾಲಕ ಹಾಗೂ ಕ್ಲೀನರ್ ಬಸ್ ಸಮೇತ ಪರಾರಿಯಾಗಿದ್ದಾರೆ. ಲಗೇಜ್ನಲ್ಲಿ ಚಿನ್ನಾಭರಣ, ಹಣ ಎಲ್ಲವೂ ಇತ್ತು ಎಂದು ಪ್ರಯಾಣಿಕರು ದೂರಿದ್ದಾರೆ.
ನಲ್ಗೊಂಡ ಬಳಿಯ ನರ್ಕತ್ಪಲ್ಲಿ ಬಳಿ ಚಾಲಕ ಮತ್ತು ಕ್ಲೀನರ್ ಇಬ್ಬರೂ ಸೇರಿ ಬಸ್ ಸ್ವಲ್ಪ ಸಮಸ್ಯೆ ಕೊಡುತ್ತಿದೆ. ರಿಪೇರಿ ಮಾಡಿಸಿಕೊಂಡು ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ.
ಜನರು ಇದನ್ನು ನಂಬಿ ತಮ್ಮ ಲಗೇಜ್ಗಳನ್ನು ಬಸ್ನಲ್ಲಿಯೇ ಬಿಟ್ಟಿದ್ದಾರೆ. ಊಟ ಮುಗಿಸಿದರೂ ಡ್ರೈವರ್ ಬಂದಿಲ್ಲ. ತದನಂತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಯಾಣಿಕರಿಗೆ ರಾತ್ರಿ ಊಟ ನೀಡಿ,ತಂಗಲು ಸ್ಥಳ ಕಲ್ಪಿಸಿದ್ದಾರೆ. ತನಿಖೆ ಶುರುವಾಗಿದೆ.