ಕುಟ್ಟಾನಾಡ್ : ಕೇರಳದ ಕುಟ್ಟಾನಾಡ್ ವಲಯದ ಅಲ್ಲಾಪುಜಾ ಎಂಬಲ್ಲಿ ಹಕ್ಕಿಜ್ವರ ಪ್ರಕರಣ ದೃಢಪಟ್ಟಿದ್ದು, ಅತ್ಯಂತ ವೇಗವಾಗಿ ಕೋಳಿ ಮತ್ತು ಬಾತುಕೋಳಿಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೊಳಿಗಳು ದಿಢೀರನೆ ಮೃತಪಟ್ಟ ಹಿನ್ನೆಲೆಯಲ್ಲಿ ಆತಂಕ ಉಂಟಾಗಿದ್ದು, ಅತ್ಯಂತ ವೇಗವಾಗಿ ಇತರೆಡೆಗೂ ಹರಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕೋಳಿ, ಬಾತುಕೋಳಿ, ಮೊಟ್ಟೆ ಮುಂತಾದವುಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲಾಪುಜಾದ ತಕಾಜಿ ಬಳಿ ದೃಢಪಟ್ಟ ಹಕ್ಕಿಜ್ವರದ ಮಾದರಿಯನ್ನು ಭೂಪಾಲ್ ನ ಹೈ ಸೆಕೆಂಡರಿ ಅನಿಮಲ್ ಡೀಸಸ್ ಸೆಂಟರ್ ಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.
ಮಂಡ್ಯದ ಕುಕ್ಕರಹಳ್ಳಿ ಕೆರೆಯಲ್ಲೂ ಇತ್ತೀಚೆಗೆ ಮೂರು ಕೊಕ್ಕರೆಗಳು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕರ್ನಾಟಕದಲ್ಲೂ ಹಕ್ಕಿಜ್ವರದ ಭೀತಿ ಆವರಿಸಿದೆ.