ಕಾಸರಗೋಡು: ಕಳೆದ ನಾಲ್ಕು ದಿನಗಳಿಂದ ಕೇರಳದಲ್ಲಿ ನಡೆಯುತ್ತಿದ್ದ ಖಾಸಗಿ ಬಸ್ಸು ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.
ಬಸ್ಸು ಮಾಲಕರ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಮಾತುಕತೆ ಬಳಿಕ ಮುಷ್ಕರ ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.
ಪ್ರಯಾಣ ದರ ಏರಿಕೆ ಸೇರಿದಂತೆ ಮಾಲಕರು ಮುಂದಿಟ್ಟ ಬೇಡಿಕೆ ಗಳನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನಲೆ ಯಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆ.
ಎರಡು ದಿನ ರಾಷ್ಟ್ರೀಯ ಮುಷ್ಕರ ದ ಹಿನ್ನಲೆಯಲ್ಲಿ ಬುಧವಾರ ದಿಂ ದ ಮತ್ತೆ ಬಸ್ಸು ಸಂಚಾರ ಪುನ ರಾರಂಭಗೊಳ್ಳಲಿದೆ.