News Karnataka Kannada
Thursday, May 02 2024
ಕೇರಳ

ಅರವಣ ಪಾಯಸಂ: ಸುಳ್ಳು ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕೆ ದೇವಸ್ವಂ ಮಂಡಳಿ

New Project 2021 11 18t110149.994
Photo Credit :
ತಿರುವನಂತಪುರಂ:  ಶಬರಿಮಲೆಯಲ್ಲಿ ಅರವಣ ಪಾಯಸಂ ವಿರುದ್ಧದ ಪ್ರಚಾರಗಳು ಸುಳ್ಳು ಮತ್ತು ವಾಸ್ತವಿಕವಾಗಿ ತಪ್ಪಾಗಿದೆ ಎಂದು ದೇವಸ್ವಂ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಶಬರಿಮಲೆ ದೇವಸ್ವಂನ ಪ್ರಮುಖ ಪ್ರಸಾದವಾದ ಅರವಣ ಪಾಯಸಂ ಮತ್ತು ಅದರ ತಯಾರಿಕೆಯ ವಿಧಾನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೈಬರ್‌ಸ್ಪೇಸ್ ಮತ್ತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನಕಲಿ ಪ್ರಚಾರದ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ವಿವರಣೆ ನೀಡಲಾಗಿದೆ.
ಇಂತಹ ಹೇಯ ಮತ್ತು ಅವಹೇಳನಕಾರಿ ಕೃತ್ಯಗಳನ್ನು ಎಸಗುವವರ ವಿರುದ್ಧ ಐಟಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಆಯುಕ್ತರು ತಿಳಿಸಿದ್ದಾರೆ.  ಕಾನೂನು ಕ್ರಮದ ಸಂಪೂರ್ಣ ಹೊಣೆಗಾರಿಕೆಯು ಇಂತಹ ಸುಳ್ಳು ಪ್ರಚಾರ ಮಾಡುವವರ ಮೇಲೆ ಮಾತ್ರ ಇರುತ್ತದೆ ಎಂದು ದೇವಸ್ವಂ ಆಯುಕ್ತರು ತಿಳಿಸಿದರು.ಶಬರಿಮಲೆ ದೇವಸ್ವಂನಲ್ಲಿರುವ ಅರವಣ ಪ್ರಸಾದದ ವಿರುದ್ಧ ಸೈಬರ್ ಚಟುವಟಿಕೆಗಳು ಮತ್ತು ಕೆಲವು ಮಾಧ್ಯಮಗಳು ನಡೆಸುವ ಅಪಪ್ರಚಾರಗಳ ವಿರುದ್ಧ ಕೇಸು ದಾಖಲಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಬರಿಮಲೆಯ ಕಾರ್ಯನಿರ್ವಾಹಕ ಅಧಿಕಾರಿ ಸನ್ನಿಧಾನಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು