News Karnataka Kannada
Sunday, May 05 2024
ಝಾರ್ಖಂಡ್

ಝಾರ್ಖಂಡ್‍: ಸ್ನೇಹಿತನನ್ನೇ ಕೊಲೆ ಮಾಡಿದ ಯುವಕರು

Murder Girl 16082021
Photo Credit :

ದೇವಗಢ,ಡಿ.23 : ವಾಗ್ವಾದ ನಡೆದ ಹಿನ್ನೆಲೆಯಲ್ಲಿ 14 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ಆತನ ಸ್ನೇಹಿತರೇ ಗಂಟಲು ಸೀಳಿ, ಕೈ-ಕಾಲುಗಳನ್ನು ಕತ್ತರಿಸಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಅರಣ್ಯವೊಂದರಲ್ಲಿ ಎಸೆದಿರುವ ಭೀಕರ ಘಟನೆ ಝಾರ್ಖಂಡ್‍ನ ದೇವಗಢ ಜಿಲ್ಲೆಯಲ್ಲಿ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಬಾಲಕ ಹಿಂದಿನ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾನೆಂದು ಅವನ ಕುಟುಂಬ ಬುಧವಾರ ದೂರು ನೀಡಿತ್ತು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್‍ಕುಮಾರ್ ಹೇಳಿದ್ದಾರೆ.

ತನಿಖೆಯ ವೇಳೆ ಹತ ಬಾಲಕನ ಗೆಳೆಯ 14 ವರ್ಷದ ಬಾಲಕನನ್ನು ಪತ್ತೆ ಮಾಡಲಾಯಿತು. ಅವನು ಹತ ಬಾಲಕನನ್ನು ರೋಹಿಣಿ ಜಿಲ್ಲೆಯ ಜಸಿದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿರುವ ಬಾಲಕನ ಮನೆಯ ಬಳಿ ಮಂಗಳವಾರ ರಾತ್ರಿ 8.30ಕ್ಕೆ ಭೇಟಿಯಾಗಿದ್ದಾಗಿ, ಆಗ ಅವಿನಾಶ್(19) ಎಂಬ ಮತ್ತೋರ್ವ ಗೆಳೆಯ ಜೊತೆಗೂಡಿದ್ದಾಗಿ ಪೊಲೀಸರಿಗೆ ತಿಳಿಸಿದ ಎಂದು ಕುಮಾರ್ ವಿವರಿಸಿದ್ದಾರೆ.

ಮೂವರೂ ಪಲಂಗಾ ಪಹಾಡ್ ಅರಣ್ಯಕ್ಕೆ ಹೋದರು. ಅಲ್ಲಿ ಅವಿನಾಶ್ ಮತ್ತು ಮೃತ ಬಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಯಿತು. ಕೂಡಲೇ ಅವಿನಾಶ್ ಕತ್ತಿಯೊಂದನ್ನು ತೆಗೆದುಕೊಂಡು ಬಾಲಕನನ್ನು ಇರಿದು, ಗಂಟಲು ಸೀಳಿ ಕೊಲೆಗೈದು ಅನಂತರ ಆತನ ಕೈಕಾಲುಗಳನ್ನು ಕತ್ತರಿಸಿ ಶರೀರದ ಭಾಗಗಳನ್ನು ಮೂರು ಗೋಣಿಚೀಲಗಳಲ್ಲಿ ಹಾಕಿ ಕಾಡಿನಲ್ಲಿ ಎಸೆದಿದ್ದಾಗಿ ತಿಳಿದುಬಂದಿತು ಎಂದು ಕುಮಾರ್ ನುಡಿದಿದ್ದಾರೆ.

ಶವವನ್ನು ವಶಪಡಿಸಿಕೊಂಡ ಪೊಲೀಸರು ಅವಿನಾಶ್‍ನನ್ನು ಬಂಧಿಸಿದ್ದಾರೆ. ಅವಿನಾಶ್ ಕೂಡ ತಪ್ಪೋಪ್ಪಿಕೊಂಡಿದ್ದು, ರಕ್ತಸಿಕ್ತ ಕತ್ತಿ ಮತ್ತು ಕೊಲೆಯಾದ ಬಾಲಕನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು