ಜಾರ್ಖಂಡ್ : ಜಾರ್ಖಂಡ್ನ ಉಪ ರಾಜಧಾನಿ ದುಮ್ಕಾದಲ್ಲಿ ಅನೈತಿಕ ಸಂಬಂಧದ ಆರೋಪದ ಮೇಲೆ ದಂಪತಿಯನ್ನು ಮರಕ್ಕೆ ಕಟ್ಟಿ ರಾತ್ರಿಯಿಡೀ ಥಳಿಸಿರು ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಸಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದ್ದು, ಈ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಥಳಿತದಿಂದ ತೀವ್ರವಾಗಿ ಗಾಯಗೊಂಡಿರುವ ದಂಪತಿಗಳನ್ನು ದುಮ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ಪ್ರಕಾರ, ಸುನೀಲ್ ಕುಮಾರ್ ಮಂಡಲ್ ಎಂಬ ವ್ಯಕ್ತಿ ಆದಿವಾಸಿ ಮಹಿಳೆಯೊಂದಿಗೆ ಸಂಭಾಷಣೆ ನಡೆಸುತ್ತಿದ್ದ. ಇಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ಗ್ರಾಮಸ್ಥರು ಇಬ್ಬರ ವಿರುದ್ಧವೂ ಅಕ್ರಮ ಸಂಬಂಧ ಆರೋಪ ಮಾಡುತ್ತಿದ್ದರು. ಶನಿವಾರ ಸಂಜೆ ಗ್ರಾಮಸ್ಥರು ಸೇರಿ ಅವರನ್ನು ಹಿಡಿದಿದ್ದಾರೆ. 20-25 ಮಂದಿ ಯುವಕರು ಇಬ್ಬರನ್ನೂ ಹಿಡಿದು ಮರಕ್ಕೆ ಕಟ್ಟಿ, ಸುನೀಲ್ ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಹಗ್ಗದಿಂದ ಕಟ್ಟಿ ಗ್ರಾಮದ ಹಲವು ಗ್ರಾಮಗಳಲ್ಲಿ ಸುತ್ತಾಡಿಸಿದ್ದಾರೆ.
ಈ ಬಗ್ಗೆ ಮಸಾಲಿಯಾ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತರಾತುರಿಯಲ್ಲಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಗುಂಪಿನ ಹಿಡಿತದಿಂದ ರಕ್ಷಿಸಿದ್ದಾರೆ. ಇಬ್ಬರನ್ನೂ ಠಾಣೆಗೆ ಕರೆತರಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ದುಮ್ಕಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ರಾಮಸ್ಥರ ಥಳಿತದಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯ ತಲೆಗೆ ಪಟ್ಟಾಗಿದ್ದು, ಸುನೀಲ್ಗೆ ಗಂಭೀರ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಮಸಾಲಿಯಾ ಪೊಲೀಸ್ ಠಾಣೆ ಈಶ್ವರ ದಯಾಳ್ ಮುಂಡಾ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ದುಮ್ಕಾದಲ್ಲಿ ಈ ರೀತಿಯ ಘಟನೆ ಹಲವು ಬಾರಿ ಮುನ್ನೆಲೆಗೆ ಬಂದಿದೆ. ಇನ್ನೂ, ಸಂತ್ರಸ್ತ ದಂಪತಿಗಳು ಅಕ್ರಮ ಸಂಬಂಧವನ್ನು ನಿರಾಕರಿಸಿದ್ದಾರೆ.