ಶ್ರೀನಗರ: ಕಳೆದ 36 ಗಂಟೆಗಳಲ್ಲಿ ಐವರು ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದಾರೆ, ಈ ವರ್ಷದ ತೀರ್ಥಯಾತ್ರೆಯಲ್ಲಿ ಸಾವನ್ನಪ್ಪಿದ ಭಕ್ತರ ಸಂಖ್ಯೆ 24 ಕ್ಕೆ ಏರಿದೆ. ಯಾತ್ರೆ ವೇಳೆ ಎತ್ತರದ ಸ್ಥಳವನ್ನು ಏರುವ ವೇಳೆ ಹೃದಯಾಘಾತ, ಅಮ್ಲಜನಕ ಕೊರತೆಯಿಂದ ಸಂಭವಿಸಿದೆ. “ಐದು ಸಾವುಗಳಲ್ಲಿ, ನಾಲ್ಕು ಪಹಲ್ಗಾಮ್ ಮಾರ್ಗದಲ್ಲಿ ಸಂಭವಿಸಿದೆ. ಒಂದು ಬಾಲ್ಟಾಲ್ ಮಾರ್ಗದಲ್ಲಿ ವರದಿಯಾಗಿದೆ.
ಮೃತಪಟ್ಟವರಲ್ಲಿ ಕರ್ತವ್ಯದಲ್ಲಿದ್ದ ಐಟಿಬಿಪಿ ಅಧಿಕಾರಿಯೂ ಸೇರಿದ್ದಾರೆ. ಸಂತ್ರಸ್ತರು ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಗುಜರಾತ್ ಹರ್ಯಾಣದವರು ಎಂದು ಮೂಲಗಳು ತಿಳಿಸಿವೆ.
ಅಮರನಾಥ ಗುಹಾ ದೇವಾಲಯವು ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಇದನ್ನು ಏರಲು ದೈಹಿಕ ಕ್ಷಮತೆ ಹೆಚ್ಚಿರಬೇಕು. ಇದೇ ಕಾರಣದಿಂದ ಅಧಿಕಾರಿಗಳು ಯಾತ್ರಿಗಳಿಗಾಗಿ ಉಚಿತ ಅಡುಗೆ ಮನೆಗಳನ್ನು ಸ್ಥಾಪಿಸಿದ್ದು, ಜಂಕ್ ಫುಡ್ ನಿಷೇಧಿಸಿದ್ದಾರೆ. ಪರಾಠಾಗಳು, ಪೂರಿಗಳು, ಸಿಹಿತಿಂಡಿ ಮತ್ತು ತಂಪು ಪಾನೀಯಗಳನ್ನು ನಿಷೇಧಿಸಲಾಗಿದೆ. ಯಾತ್ರಿಗಳ ಕ್ಯಾಂಪ್ ಒಳಗೆ ಮತ್ತು ಸುತ್ತಮುತ್ತ ಸಿಗರೇಟ್ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಜುಲೈ 1 ರಂದು ಪ್ರಾರಂಭವಾದ ಈ ವರ್ಷದ 62 ದಿನಗಳ ಸುದೀರ್ಘ ಯಾತ್ರೆಯು ಶ್ರಾವಣ ಪೂರ್ಣಿಮಾ ಹಬ್ಬದ ಜೊತೆಗೆ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ.