ಜಮ್ಮು, ಅ.16: ಕಣಿವೆಯಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಪುರಾನ್ ಕೃಷ್ಣ ಭಟ್ ಅವರ ಅಂತ್ಯಕ್ರಿಯೆ ಭಾನುವಾರ ಜಮ್ಮುವಿನಲ್ಲಿ ನಡೆಯಿತು.
ಭಟ್ ಅವರ ಪಾರ್ಥಿವ ಶರೀರವನ್ನು ಶೋಪಿಯಾನ್ ಜಿಲ್ಲೆಯ ಚೌದ್ರಿಗುಂಡ್ ಗ್ರಾಮದಿಂದ ಶನಿವಾರ ಸಂಜೆ ಅವರ ಜಮ್ಮು ನಿವಾಸಕ್ಕೆ ತರಲಾಯಿತು.
ಶನಿವಾರ ಬೆಳಿಗ್ಗೆ ಚೌದ್ರಿಗುಂಡ್ ಗ್ರಾಮದ ಅವರ ಮನೆಯ ಹೊರಗೆ ಭಯೋತ್ಪಾದಕರು ಅವರನ್ನು ಗುಂಡಿಕ್ಕಿ ಕೊಂದರು.
ಕಾಶ್ಮೀರಿ ಪಂಡಿತರು ಮತ್ತು ಇತರರು ಸೇರಿದಂತೆ ಅನೇಕ ಜನರು ಭಟ್ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.