ಜಮ್ಮು ಮತ್ತು ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಆರ್ಟಿಕಲ್ 370 ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಅಡ್ಡಗೋಡೆಯಂತಿತ್ತು. ಈ ಗೋಡೆಯನ್ನು ಸರ್ಕಾರ ಕೆಡವಿದೆ, ಅದನ್ನು ತೆಗೆದುಹಾಕಿದ ನಂತರ ರಾಜ್ಯದ ಜನರಿಗೆ ಪರಿಹಾರವೂ ಸಿಕ್ಕಿದೆ. ಮಹಿಳೆಯರು ಈ ಮೊದಲು ಪಡೆದಿರದ ಹಕ್ಕುಗಳನ್ನು ಪಡೆದರು ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚಿದ ದಿನಗಳು ಇದ್ದವು, ಇಂದು ಶಾಲೆಗಳನ್ನು ಅಲಂಕರಿಸುವ ದಿನಗಳು ಬಂದಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಹಿಂದೆ ತೀವ್ರ ಅನಾರೋಗ್ಯದ ಚಿಕಿತ್ಸೆಗಾಗಿ ದೆಹಲಿಗೆ ಹೋಗಬೇಕಿತ್ತು. ಆದರೆ ಈಗ ಜಮ್ಮುವಿನಲ್ಲೇ ಏಮ್ಸ್ ಸಿದ್ಧವಾಗಿದೆ. ಮೊದಲು ಅಪಹರಣ, ಪ್ರತ್ಯೇಕತೆಗೆ ಸಂಬಂಧಿಸಿದ ಸುದ್ದಿಯೇ ಇರುತ್ತಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.
ಈಗ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಈಗ ನಾವು ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪ್ರತಿಜ್ಞೆ ಮಾಡಿದ್ದೇವೆ ಎಂದರು.
ಇಂದು ಶ್ರೀನಗರದಿಂದ ಸಂಗಲ್ದಾನ್ಗೆ ಮತ್ತು ಸಂಗಲ್ದಾನ್ನಿಂದ ಬಾರಾಮುಲ್ಲಾಗೆ ರೈಲು ಹೊರಟಿದೆ. ದೇಶವಾಸಿಗಳು ರೈಲಿನಲ್ಲಿ ಕಾಶ್ಮೀರ ತಲುಪುವ ದಿನ ದೂರವಿಲ್ಲ. ಇಂದು ಕಾಶ್ಮೀರಕ್ಕೆ ಮೊದಲ ವಿದ್ಯುತ್ ರೈಲು ಸಿಕ್ಕಿದೆ. ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ವಂದೇ ಭಾರತ್ ರೈಲುಗಳ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹೇಳಿದರು.