ಶ್ರೀನಗರ, ; ಶಸ್ತ್ರಾಸ್ತ್ರ ಪರವಾನಗಿ ಗೋಲ್ಮಾಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಜಮ್ಮು ಕಾಶ್ಮಿರದ, ದೆಹಲಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಶೋಧನಾ ಕಾರ್ಯಾಚರಣೆ ಕೈಗೊಂಡಿದೆ. ರಾಜಸ್ಥಾನದ ಭಯೋತ್ಪಾದನೆ ನಿಗ್ರಹ ದಳದ 2017ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ಬೆಳಕಿಗೆ ತಂದಿತ್ತು.
ಮಾಜಿ ಯೋಧರ ಹೆಸರಿನಲ್ಲಿ ಸುಮಾರು 3 ಸಾವಿರ ಶಸ್ತ್ರಾಸ್ತ್ರ ಪರವಾನಗಿಗಳನ್ನು ವಿತರಿಸಲಾಗಿತ್ತು. ರಾಜಸ್ಥಾನ ಎಟಿಎಸ್ ಸುಮಾರು 50 ಜನರನ್ನು ಬಂಧಿಸಿತ್ತು. ಹಗರಣದ ಸ್ವರೂಪ ದೊಡ್ಡದಾಗುತ್ತಿದ್ದಂತೆ ಜಮ್ಮ ಕಾಶ್ಮೀರದ ರಾಜ್ಯಪಾಲರಾದ ಎನ್.ಎನ್.ವೋರಾ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. 2012 ಮತ್ತು 2016ರ ನಡುವೆ ಹಗರಣ ನಡೆದಿತ್ತು. 2019ರ ಡಿಸೆಂಬರ್ನಲ್ಲಿ ತನಿಖೆ ಆರಂಭಿಸಿರುವ ಸಿಬಿಐ ಇಂದು ಬೆಳಗ್ಗೆ ಶ್ರೀನಗರ, ಜಮ್ಮು, ಗುರಗಾಂ, ನೋಯಿಡಾದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಕಾಶ್ಮೀರ ರಾಜ್ಯದ ಕುಪ್ವಾರ, ಬಾರಾಮುಲ್ಲಾ, ಉದಯಂಪುರ್, ಕಿಸ್ತವಾರ್, ಸೋಪೈನ್, ರಜೋರಿ, ದೊಡಾ, ಪುಲ್ವಾಮ ಸೇರಿದಂತೆ ಇತರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಜುಮ್ಮು ಕಾಶ್ಮೀರದಲ್ಲಿ ಸುಮಾರು ಎರಡು ಲಕ್ಷ ಶಸ್ತ್ರಾಸ್ತ್ರ ಪರವಾನಗಿಗಳು ದುರುಪಯೋಗವಾಗಿವೆ ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಎರಡು ಪ್ರಕರಣಗಳು ದಾಖಲಾಗಿವೆ. ಮಾಜಿ ಯೋಧರ ಹೆಸರಿನಲ್ಲಿ ನಕಲಿ ಹಾಗೂ ಅಕ್ರಮ ಪರವಾನಗಿಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಮಾಣದ ಭ್ರಷ್ಟಚಾರ ನಡೆದಿದೆ ಎಂಬ ಆರೋಪಗಳಿವೆ.ಜಮ್ಮು ಕಾಶ್ಮೀರದಲ್ಲದವರಿಗೂ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಸ್ತ್ರಾಸ್ತ್ರ ಪರವಾನಗಿ ಪ್ರಕರಣ ಸೇರಿದಂತೆ ಭಾರತೀಯರಲ್ಲದವರ ನಕಲಿ ದಾಖಲಾತಿಗಳನ್ನು ವಿತರಿಸಿರುವ ಆರೋಪಗಳು ಇವೆ.
ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ; ಜಮ್ಮು ಕಾಶ್ಮೀರದ ಹಲವೆಡೆ ಸಿಬಿಐ ಧಾಳಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.