News Karnataka Kannada
Friday, May 03 2024
ದೇಶ

ಭಾರತ ಈಗ ಪಾಕ್‌ ನ ಕುಟಿಲ ನೀತಿಯನ್ನು ಅಪ್ರಸ್ತುತಗೊಳಿಸಿದೆ: ಜೈಶಂಕರ್‌

Jai Shankr
Photo Credit : News Kannada

ನವದೆಹಲಿ: ಗಡಿಯಾಚೇಗಿನ ಭಯೋತ್ಪಾದನೆ ನೀತಿಯನ್ನು ಬಳಸುವ ಮೂಲಕ ಪಾಕಿಸ್ತಾನ ಭಾರತವನ್ನು ವಿಶ್ವಸಂಸ್ಥೆ ಟೇಬಲ್‌ ಗೆ ಕರೆತರುವ ತಂತ್ರ ಅನುಸರಿಸುತ್ತಿರುವುದಾಗಿ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ.ಶಂಕರ್‌ ಅವರು, ಪಾಕ್‌ ನ ಹಳೆ ಚಾಳಿಯ ನೀತಿಯನ್ನು ಭಾರತ ಅಪ್ರಸ್ತುತಗೊಳಿಸಿದೆ ಎಂದರು.

ಎಎನ್‌ ಐ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್‌,  ಭಾರತ ಈಗ ಪಾಕ್‌ ನ ಕುಟಿಲ ನೀತಿಯನ್ನು ಅಪ್ರಸ್ತುತಗೊಳಿಸಿದೆ. ಪಾಕಿಸ್ತಾನ ಹಲವು ದಶಕಗಳಿಂದಲೂ ಗಡಿಯಾಚೇಗಿನ ಭಯೋತ್ಪಾದನೆಯ ನೆಪದಲ್ಲಿ ಭಾರತವನ್ನು ವಿಶ್ವಸಂಸ್ಥೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸಿತ್ತು. ಇದು ಪಾಕ್‌ ನ ಮೂಲಭೂತ ನೀತಿಯಾಗಿತ್ತು. ಆದರೆ ಭಾರತ ಈಗ ಪಾಕ್‌ ನ ಕುಟಿಲ ನೀತಿಯಯನ್ನು ಹೊಸಕಿ ಹಾಕುತ್ತಿದೆ ಎಂದು ಹೇಳಿದರು.

ನಾವು ನೆರೆಯ ದೇಶದೊಂದಿಗೆ ವ್ಯವಹರಿಸುವುದಿಲ್ಲ ಎಂಬುದು ಒಂದು ಪ್ರಕರಣವಲ್ಲ. ಕೊನೆಗೂ ನೆರೆಹೊರೆಯವರು, ನೆರೆಹೊರೆಯವರಾಗಿರುತ್ತಾರೆ. ಆದರೆ ಪಾಕಿಸ್ತಾನ ನಿಗದಿಗೊಳಿಸುವ ನೀತಿಯ ಆಧಾರದ ಮೇಲೆ ನಾವು ವ್ಯವಹರಿಸುವುದಿಲ್ಲ. ಪಾಕಿಸ್ತಾನವೇ ಭಯೋತ್ಪಾದನೆ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಮಾತುಕತೆಯ ಟೇಬಲ್‌ ಗೆ ಬರಬೇಕು ಎಂದು ಜೈಶಂಕರ್‌ ಪ್ರತಿಪಾದಿಸಿದ್ದಾರೆ. ಕೆನಡಾದಲ್ಲಿನ ಖಲಿಸ್ತಾನಿ ಚಳವಳಿಯ ತೀವ್ರತೆ ಕುರಿತು ಮಾತನಾಡಿದ ಅವರು, ಕೆನಡಾದ ನೆಲದಲ್ಲಿ ಖಲಿಸ್ತಾನಿ ಸಂಘಟನೆಗೆ ಭಾರತ ಮತ್ತು ಕೆನಡಾದ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡುವ ಚಟುವಟಿಕೆಯಲ್ಲಿ ತೊಡಗಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು