ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್ನಲ್ಲಿ ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟ ಘಟನೆ ನಡೆದಿದೆ.
ಅವರ ಜೊತೆಗಿದ್ದ ಸಾಕು ನಾಯಿಯ ಕಾರಣಕ್ಕೆ ಅವರ ಮೃತ ದೇಹಗಳು 48 ಗಂಟೆಗಳ ನಂತರ ಪತ್ತೆಯಾಗಿವೆ.
ಟ್ರೆಕ್ಕಿಂಗ್ ತೆರಳಿದ್ದ ಮಹಾರಾಷ್ಟ್ರದ ಅಭಿನಂದನ್ ಗುಪ್ತ ಹಾಗೂ ಪ್ರಣೀತಾ ವಾಲಾ ತೀವ್ರ ಚಳಿ, ಹಿಮಪಾತದ ಕಾರಣದಿಂದ ಸಾವನ್ನಪ್ಪಿದ್ದಾರೆ.
ತನ್ನ ಮಾಲೀಕರ ಶವದ ಜಾಗ ಬಿಟ್ಟು ಹೋಗದ ಜರ್ಮನ್ ಶೆಫರ್ಡ್ ಶ್ವಾನ, ಎರಡು ದಿನದವರೆಗೂ ಬೇರೆಯವರು ಆ ಸ್ಥಳಕ್ಕೆ ಬರುವವರೆಗೂ ಮೃತ ದೇಹದ ಬಳಿಯೇ ಕಾಯುತ್ತಾ ನಿರಂತರವಾಗಿ ಬೊಗಳಿದೆ.
ನಾಯಿ ಬೊಗಳುವುದನ್ನು ಕೇಳಿದ ರಕ್ಷಣಾ ತಂಡ ಚಾರಿಣಿಗರ ಮೃತ ದೇಹಗಳನ್ನು ಪತ್ತೆ ಮಾಡಿದ್ದಾರೆ. ಮಾಲೀಕರು ಸಾವನ್ನಪ್ಪಿರುವ ದುಃಖದಲ್ಲಿರುವ ಜರ್ಮನ್ ಶೆಫರ್ಡ್ ಶ್ವಾನ ಎರಡು ದಿನದ ಬಳಿಕ ಆಹಾರ ಕೊಟ್ಟರೂ ಸೇವಿಸಿಲ್ಲ ಎಂದು ವರದಿಯಾಗಿದೆ.