News Karnataka Kannada
Wednesday, May 08 2024
ಹಿಮಾಚಲ ಪ್ರದೇಶ

ಹಿಮಪಾತದಿಂದ ಚಾರಣಿಗರು ಸಾವು: ಮೃತದೇಹದ ಮುಂದೆ 2 ದಿನ ರೋದಿಸಿದ ಶ್ವಾನ

ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್‌ನಲ್ಲಿ ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟ ಘಟನೆ ನಡೆದಿದೆ.
Photo Credit : News Kannada

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್‌ನಲ್ಲಿ ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟ ಘಟನೆ ನಡೆದಿದೆ.

ಅವರ ಜೊತೆಗಿದ್ದ ಸಾಕು ನಾಯಿಯ ಕಾರಣಕ್ಕೆ ಅವರ ಮೃತ ದೇಹಗಳು 48 ಗಂಟೆಗಳ ನಂತರ ಪತ್ತೆಯಾಗಿವೆ.

ಟ್ರೆಕ್ಕಿಂಗ್​​ ತೆರಳಿದ್ದ ಮಹಾರಾಷ್ಟ್ರದ ಅಭಿನಂದನ್ ಗುಪ್ತ ಹಾಗೂ ಪ್ರಣೀತಾ ವಾಲಾ ತೀವ್ರ ಚಳಿ, ಹಿಮಪಾತದ ಕಾರಣದಿಂದ ಸಾವನ್ನಪ್ಪಿದ್ದಾರೆ.

ತನ್ನ ಮಾಲೀಕರ ಶವದ ಜಾಗ ಬಿಟ್ಟು ಹೋಗದ ಜರ್ಮನ್ ಶೆಫರ್ಡ್ ಶ್ವಾನ, ಎರಡು ದಿನದವರೆಗೂ ಬೇರೆಯವರು ಆ ಸ್ಥಳಕ್ಕೆ ಬರುವವರೆಗೂ ಮೃತ ದೇಹದ ಬಳಿಯೇ ಕಾಯುತ್ತಾ ನಿರಂತರವಾಗಿ ಬೊಗಳಿದೆ.

ನಾಯಿ ಬೊಗಳುವುದನ್ನು ಕೇಳಿದ ರಕ್ಷಣಾ ತಂಡ ಚಾರಿಣಿಗರ ಮೃತ ದೇಹಗಳನ್ನು ಪತ್ತೆ ಮಾಡಿದ್ದಾರೆ.  ಮಾಲೀಕರು ಸಾವನ್ನಪ್ಪಿರುವ ದುಃಖದಲ್ಲಿರುವ ಜರ್ಮನ್ ಶೆಫರ್ಡ್ ಶ್ವಾನ ಎರಡು ದಿನದ ಬಳಿಕ ಆಹಾರ ಕೊಟ್ಟರೂ ಸೇವಿಸಿಲ್ಲ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು