ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟದಿಂದಾಗಿ ಕನಿಷ್ಠ 41 ಮಂದಿ ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಮ್ಲಾದ ಸಮ್ಮರ್ ಹಿಲ್ ಪ್ರದೇಶದಲ್ಲಿ ಕುಸಿದ ದೇವಾಲಯದ ಅವಶೇಷಗಳಡಿಯಲ್ಲಿ 9 ಜನರು ಸಮಾಧಿಯಾಗಿದ್ದರೆ, ಸೋಲನ್ ಜಿಲ್ಲೆಯ ಜಾಡೋನ್ ಗ್ರಾಮದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದ ನಂತರ 7 ಜನರು ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಮ್ಮರ್ ಹಿಲ್ ಪ್ರದೇಶದಲ್ಲಿ ದೇವಸ್ಥಾನ ಕುಸಿತದ ಸ್ಥಳ ಮತ್ತು ಶಿಮ್ಲಾದ ಫಾಗ್ಲಿ ಪ್ರದೇಶಕ್ಕೆ ಭೇಟಿ ನೀಡಿದರು. ಅಲ್ಲಿ ಹಲವಾರು ಮನೆಗಳು ಮಣ್ಣು ಮತ್ತು ಕೆಸರಿನ ಅಡಿಯಲ್ಲಿ ಹೂತುಹೋಗಿವೆ.
ಏತನ್ಮಧ್ಯೆ, ಉತ್ತರಾಖಂಡದಲ್ಲಿ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪೊಲೀಸರು ಮತ್ತು ಎಸ್ಡಿಆರ್ಎಫ್ ತಂಡವು ಅಲರ್ಟ್ನಲ್ಲಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಡೆಹ್ರಾಡೂನ್ನಲ್ಲಿ ಸೋಮವಾರ ಬೆಳಿಗ್ಗೆ ಕಾಲೇಜು ಕಟ್ಟಡ ಕುಸಿದಿದೆ. ಮಂದಾಕಿನಿ ನದಿಯ ಪ್ರವಾಹದಿಂದ ಚಮೋಲಿ ಜಿಲ್ಲೆಯ ರುದ್ರಪ್ರಯಾಗ-ಗೌರಿಕುಂಡ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ.
A College building at Maldevta near Dehradun in Uttarakhand collapsed as torrential rains pounded the state, flooding major rivers and causing landslides along the national highways to #Badrinath, #Kedarnath and Gangotri shrines.#Uttarakhand #Dehradun #Maldevta pic.twitter.com/moYB4SL3vt
— Surya Reddy (@jsuryareddy) August 14, 2023