ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್ ಪ್ರದೇಶದಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಸ್ವಾಮಿನಿಷ್ಠೆ ಮೆರೆದಿರುವ ಕರುಣಾಜನಕ ಘಟನೆ ನಡೆದಿದೆ.
ಹಿಮಾಚಲ ಪ್ರದೇಶಕ್ಕೆ ಇಬ್ಬರು ಟ್ರಕ್ಕಿಂಗ್ ಗೆ ಹೋಗಿದ್ದಾರೆ. ಬೀರ್ ಬಿಲ್ಲಿಂಗ್ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ. ಆಗ ಜೊತೆಗಿದ್ದ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕರ ಶವದ ಜಾಗ ಬಿಟ್ಟು ಎಲ್ಲಿಯೂ ಹೋಗಿಲ್ಲ. ಎರಡು ದಿನದವರೆಗೂ ಬೇರೆಯವರು ಆ ಸ್ಥಳಕ್ಕೆ ಬರುವವರೆಗೂ ಅಲ್ಲಿಯೇ ನಿಂತು ಕಾದಿದೆ.
ತೀವ್ರ ಚಳಿ, ಹಿಮಪಾತದ ಕಾರಣದಿಂದ ಟ್ರಕ್ಕಿಂಗ್ ಹೋಗಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಆದರೆ ಟ್ರಕ್ಕಿಂಗ್ನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಈ ನಾಯಿ ತನ್ನ ಮಾಲೀಕರ ಶವವನ್ನು ಬಿಟ್ಟು ಹೋಗಿಲ್ಲ. 2 ದಿನದ ಬಳಿಕ ಯಾರೋ ಈ ನಾಯಿಯ ಮೊರೆ ಕೇಳಿ ಬಂದು ನೋಡಿದ್ದಾರೆ.
ಸದ್ಯ ಜರ್ಮನ್ ಶೆಫರ್ಡ್ ಇದ್ದ ಜಾಗದಿಂದ ಮೃತದೇಹವನ್ನು ಸ್ಥಳಾಂತರ ಮಾಡಲಾಗಿದೆ. ತನ್ನ ಮಾಲೀಕ ಸಾವನ್ನಪ್ಪಿದ ದುಃಖದಿಂದ ಎರಡು ದಿನದ ಬಳಿಕ ಆಹಾರ ಕೊಟ್ಟರೂ ಜರ್ಮನ್ ಶೆಫರ್ಡ್ ನಾಯಿ ಸೇವಿಸುತ್ತಿಲ್ಲವಂತೆ. ಸೋಷಿಯಲ್ ಮೀಡಿಯಾದಲ್ಲಿ ಜರ್ಮನ್ ಶೆಫರ್ಡ್ ನಾಯಿ ಸ್ವಾಮಿನಿಷ್ಠೆ ತೋರಿರುವ ವಿಡಿಯೋ ವೈರಲ್ ಆಗಿದೆ.
“In Bir Billing, Himachal Pradesh, a touching scene unfolded. Two trackers lost their life , but their faithful German Shepherd stood watch for 2 days until help arrived. Even afterward, the dog’s plaintive cries rejected food. Dogs, like this faithful companion, embody the… pic.twitter.com/wyLpRHWGSu
— Nikhil saini (@iNikhilsaini) February 8, 2024