News Karnataka Kannada
Sunday, May 05 2024
ಹರ್ಯಾಣ

ಸ್ಕೂಲ್‌ ಬಸ್‌ ಪಲ್ಟಿಯಾಗಿ 6 ಮಕ್ಕಳ ದಾರುಣ ಸಾವು : 15 ಮಕ್ಕಳಿಗೆ ಗಾಯ

ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಸ್ಕೂಲ್‌ ಬಸ್‌ ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 17 ಮಕ್ಕಳು ಗಾಯಗೊಂಡಿದ್ದಾರೆ.
Photo Credit : NewsKarnataka

ಚಂಡೀಗಢ: ಹರಿಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಸ್ಕೂಲ್‌ ಬಸ್‌ ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 15 ಮಕ್ಕಳು ಗಾಯಗೊಂಡಿದ್ದಾರೆ.

ಜಿಲ್ಲೆಯಲ್ಲಿರುವ ಜಿಎಲ್‌ ಪಬ್ಲಿಕ್‌ ಶಾಲೆಯಲ್ಲಿ ನಾಲ್ಕರಿಂದ 10ನೇ ತರಗತಿವರೆಗೆ ಓದುತ್ತಿರುವ 40 ವಿದ್ಯಾರ್ಥಿಗಳಿದ್ದ ಶಾಲಾ ಬಸ್‌ ಮರಕ್ಕೆ ಡಿಕ್ಕಿಯಾಗಿ, ಮಗುಚಿ ಬಿದ್ದಿದೆ. ಮದ್ಯಪಾನ ಮಾಡಿದ್ದ ಬಸ್‌ ಚಾಲಕನು ನಿಯಂತ್ರಣ ತಪ್ಪಿದಾಗ ಬಸ್‌ನಿಂದ ಜಿಗಿದಿದ್ದಾನೆ. ಇದಾದ ಬಳಿಕ ಆರು ವಿದ್ಯಾರ್ಥಿಗಳು ಮೃತಪಟ್ಟರೆ, 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ 14 ವಿದ್ಯಾರ್ಥಿಗಳು ಡಿಸ್‌ಚಾರ್ಜ್‌ ಆಗಿದ್ದರೆ, ಇನ್ನೂ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇನ್ನು, ರಂಜಾನ್‌ ರಜೆ ಇದ್ದರೂ ತರಗತಿಗಳಿಗೆ ರಜೆ ಘೋಷಿಸದ ಕಾರಣ ಶಾಲೆ ಪ್ರಾಂಶುಪಾಲ, ಕಾರ್ಯದರ್ಶಿ ಹಾಗೂ ಪಾನಮತ್ತ ವಾಹನ ಚಾಲಕನನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ಆರು ವರ್ಷಗಳ ಹಿಂದೆಯೇ ಸ್ಕೂಲ್‌ ಬಸ್‌ನ ಫಿಟ್‌ನೆಸ್‌ ಸರ್ಟಿಫಿಕೇಟ್‌ನ ಅವಧಿ ಮುಗಿದಿದೆ ಎಂದು ಶಾಲೆಯ ದಾಖಲೆಗಳಿಂದ ತಿಳಿದುಬಂದಿದೆ. ಇದಕ್ಕಾಗಿ ರಸ್ತೆ ಸಾರಿಗೆ ಅಧಿಕಾರಿಯೊಬ್ಬನನ್ನು ಅಮಾನತುಗೊಳಿಸಲಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು