ಪಾಣಿಪಟ್: ಹೊಸ ವರ್ಷಾಚರಣೆಯ ವೇಳೆ 9 ದಿನಗಳ ಬಿಡುವಿನ ಬಳಿಕ ಜನವರಿ ಮೂರರಿಂದ ಎರಡನೇ ಹಂತ ಪಾದಯಾತ್ರೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದ ಯಾತ್ರೆ ನಿನ್ನೆ ಸಂಜೆ ಹರ್ಯಾಣ ರಾಜ್ಯ ಪ್ರವೇಶಿಸಿದೆ.
ಈ ನಡುವೆ ರಾಹುಲ್ಗಾಂಧಿ ಅವರ ತಾಯಿ ಸೋನಿಯಾಗಾಂಧಿಯವರಿಗೆ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಬುಧವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸಂಜೆ ಯಾತ್ರೆ ವಿರಮಿಸಿದ ಬಳಿಕ ರಾಹುಲ್ಗಾಂಧಿ ದೆಹಲಿಗೆ ತೆರಳಿ ತಾಯಿಯನ್ನು ಭೇಟಿ ಮಾಡಿದರು.
ನಂತರ ಇಂದು ಬೆಳಗ್ಗೆ ವಾಪಾಸ್ ಬಂದು ಯಾತ್ರೆ ಕೂಡಿಕೊಂಡರು. ಹರ್ಯಾಣದ ಪಾಣಿಪಟ್ನ ಸೋನಾಲಿ ಗಡಿ ಭಾಗದಿಂದ ಯಾತ್ರೆ ಪುನರ್ ಆರಂಭವಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಧ್ಯಾಹ್ನ ಪಾಣಿಪಟ್ನಲ್ಲಿ ನಡೆಯುವ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಮುಂದುವರೆಯುವ ಯಾತ್ರೆ ಹರ್ಯಾಣದ ಕರ್ನಲ್, ಕುರುಕ್ಷೇತ್ರ, ಅಂಬಾಲ ಜಿಲ್ಲೆಗಳಲ್ಲಿ ಒಟ್ಟು 130 ಕಿಲೋ ಮೀಟರ್ ಸಂಚರಿಸಲಿದೆ. ನಂತರ ಪಂಜಾಬ್ ಮಾರ್ಗವಾಗಿ ಮುನ್ನೆಡೆಯಲಿದೆ.