ಅಹಮದಾಬಾದ್: ಮಧ್ಯಪ್ರದೇಶದ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಗುಜರಾತ್ಗೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದು, ರಾಜ್ಯದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಹಿಂದುತ್ವ ಯುವ ನಾಯಕ ಶಾಸ್ತ್ರಿ ಜೂನ್ 1 ಮತ್ತು 2 ರಂದು ರಾಜ್ಕೋಟ್ನ ರೇಸ್ಕೋರ್ಸ್ನಲ್ಲಿ ಹಿಂದು ಅಧಿವೇಶನ ನಡೆಸಲು ಸಜ್ಜಾಗಿದ್ದಾರೆ.
ಶಾಸ್ತ್ರಿ ಅವರಿಗೆ ಬೆಂಬಲ ಮತ್ತು ವಿರೋಧ ಹೆಚ್ಚುತ್ತಿದೆ. ರಾಜ್ಕೋಟ್, ಸೂರತ್ ಮತ್ತು ಅಹಮದಾಬಾದ್ನಲ್ಲಿ “ದೈವಿಕ ದರ್ಬಾರ್” ಗಾಗಿ ಸಿದ್ಧತೆಗಳು ನಡೆಯುತ್ತಿವೆ. ಗುಜರಾತ್ನ ಮಾಜಿ ಮುಖ್ಯಮಂತ್ರಿ ಶಂಕರಸಿನ್ಹ ವಘೇಲಾ ಅವರು ಶಾಸ್ತ್ರಿ ಅವರನ್ನು ಟೀಕಿಸಿದ್ದಾರೆ, ಶಾಸ್ತ್ರಿ ಅವರು ಬಿಜೆಪಿಯ ಮಾರ್ಕೆಟಿಂಗ್ ಸಾಧನ. ಧರ್ಮದ ಸೋಗಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ‘ಬಿಜೆಪಿಯವರು ತಮ್ಮ ರಾಜಕೀಯ ತಂತ್ರದ ಭಾಗವಾಗಿ ಸುಳ್ಳು ಪವಾಡಗಳು ಮತ್ತು ಧಾರ್ಮಿಕ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಯಂತೆ ರೈತರಿಗೆ ಹತ್ತಿ ಬೆಲೆಯನ್ನು 1500 ರೂ.ನಿಂದ 2400 ರೂ.ಗೆ ಹೆಚ್ಚಿಸಲು ತಾವು ತಮ್ಮ ದೈವಿಕ ಶಕ್ತಿಯನ್ನು ಬಳಸಬೇಕೆಂದು ಸಾವರಕುಂಡ್ಲಾದ ಲಿಲಿಯ ಮಾಜಿ ಶಾಸಕ ಪ್ರತಾಪ್ ದೂದತ್ ಅವರು ಶಾಸ್ತ್ರಿ ಅವರಿಗೆ ವ್ಯಂಗ್ಯದ ಪತ್ರ ಬರೆದಿದ್ದಾರೆ.
ಗುಜರಾತ್ಗೆ ಡ್ರಗ್ಸ್ ಹೇಗೆ ಬರುತ್ತಿದೆ ಎಂಬುದನ್ನು ಶಾಸ್ತ್ರಿ ಬಹಿರಂಗಪಡಿಸಲಿ ಎಂದು ರಾಜ್ಕೋಟ್ ವಾಣಿಜ್ಯ ಸಹಕಾರಿ ಬ್ಯಾಂಕ್ ಸಿಇಒ ಪುರುಷೋತ್ತಮ್ ಪಿಪಾರಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸವಾಲು ಹಾಕಿದ್ದಾರೆ. ಈ ಮಾಹಿತಿ ನೀಡಿದರೆ ಐದು ಲಕ್ಷ ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದಾರೆ.