News Karnataka Kannada
Saturday, May 04 2024
ಗುಜರಾತ್

ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಗುಜರಾತ್‌ ಬಂದ್‌: ಜಿಗ್ನೇಶ್‌ ಮೇವಾನಿ

Jignesh
Photo Credit :

 ಗುಜರಾತ್‌: ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಗುಜರಾತ್‌ ಬಂದ್‌ ಮಾಡುವುದಾಗಿ ವಡ್ಗಾಮ್‌ ಶಾಸಕ ಜಿಗ್ನೇಶ್‌ ಮೇವಾನಿ ಗುಜರಾತ್‌ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಅಸ್ಸಾಂನಿಂದ ಬಿಡುಗಡೆಯಾಗಿ ಬಂದ ಬಳಿಕ ವಡಾಜ್ ಪ್ರದೇಶದ ರಾಮ್‌ದೇವ್ ಪಿರ್ ನೋ ಟೆಕ್ರೋದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೇವಾನಿ “2016ರ ಉನಾ ಪ್ರತಿಭಟನೆಯ ಸಂದರ್ಭದಲ್ಲಿ ದಲಿತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಜೂನ್‌ 1 ರಂದು ಗುಜರಾತ್‌ ಬಂದ್‌ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.

“ಪಾಟಿದಾರ್‌ ಆಂದೋಲನಕ್ಕೆ ಸಂಬಂಧಿಸಿದಂತೆ ಪಾಟಿದಾರರರ ಮೇಲೀನ ಪ್ರಕರಣಗಳನ್ನು ವಾಪಸ್‌ ಪಡೆದಂತೇ ದಲಿತರ ಮೇಲಿನ ಪ್ರಕರಣಗಳನ್ನುವಾಪಸ್‌ ಪಡೆಯಬೆಕು. ಪಾಟಿದಾರರ ಕೇಸ್‌ ಗಳನ್ನು ವಾಪಸ್‌ ಪಡೆದಿರುವುದಕ್ಕೆ ನಮ್ಮ ಬೆಂಬಲವಿದೆ. ಒಂದು ವೇಳೆ ಸರ್ಕಾರ ಹಿಂಪಡೆಯಲಿಲ್ಲವೆಂದರೆ ಗುಜರಾತ್‌ ಬಂದ್‌ ಮಾಡಲಾಗುತ್ತದೆ” ಎಂದಿದ್ದಾರೆ.

ಈ ಸಮಾವೇಶವು ಕಾಂಗ್ರೆಸ್‌ ನಿಂದ ಆಯೋಜನೆಯಾಗಿದ್ದು ಹಲವು ಕಾಂಗ್ರೆಸ್‌ ಮುಖಂಡರೂ ಕೂಡ ಭಾಗಿಯಾಗಿದ್ದರು ಎಂದು ಮೂಲಗಳು ವರದಿ ಮಾಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು