News Karnataka Kannada
Sunday, May 19 2024
ಗೋವಾ

ಗೋವಾ : ಚಲಿಸುತ್ತಿದ್ದ ಬಸ್ಸಿನಿಂದ ಕಳಚಿದ ಟಯರ್ ಗಳು

Photo Credit :

ಪಣಜಿ: ಕರ್ನಾಟಕದ ಬಾದಾಮಿಯಿಂದ ಶನಿವಾರ ರಾತ್ರಿ ಗೋವಾಕ್ಕೆ ಆಗಮಿಸುತ್ತಿದ್ದ ಕದಂಬ ಬಸ್ ನ ಹಿಂಬದಿಯ ಟಯರ್‍ ಗಳು ಇದ್ದಕ್ಕಿದ್ದಂತೆಯೇ ಕಳಚಿದ ಘಟೆನೆ ನಡೆದಿದೆ

ಅದೃಷ್ಠವಶಾತ್ ಬಸ್ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ನಡುವೆ ಕದಂಬ ಸಾರಿಗೆಯ ಉತ್ತಮ ಗುಣಮಟ್ಟದ ಬಸ್‍ಗಳನ್ನು ಗೋವಾದಿಂದ ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗಕ್ಕೆ ಕಳುಹಿಸಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಮುಂಬಯಿ, ಪುಣೆ, ಶಿರಡಿ, ಬೆಂಗಳೂರು, ಮೈಸೂರು, ಮುಂತಾದ ಮಾರ್ಗಗಳಲ್ಲಿ ಕದಂಬ ಸಾರಿಗೆಯು ಹವಾನಿಯಂತ್ರಿತ ಬಸ್‍ಗಳ ಸೇವೆಯನ್ನು ಒದಗಿಸುತ್ತದೆ. ಆದರೆ ಬಸ್ ದುರಸ್ತಿ ಅಥವಾ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದ ಕಾರಣ ಇಂತಹ ಘಟನೆಗಳು ಮರುಕಳಿಸುವಂತಾಗಿದೆ.

ಪೊಂಡಾ ಸಮೀಪದ ಆರ್ಲ-ಕೇರಿ ಸಾವಯಿವೇರೆ ಮಾರ್ಗದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಕದಂಬ ಬಸ್ ಮಾರ್ಗ ಮಧ್ಯದಲ್ಲಿ ಡೀಸೆಲ್ ಖಾಲಿ ಆಗಿ ನಿಂತಿತ್ತು. ಈ ಘಟನೆಯನ್ನು ಕದಂಬ ಮಹಾಮಂಡಳದ ಅಧ್ಯಕ್ಷ ಉಲ್ಲಾಸ್ ನಾಯ್ಕ್ ರವರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ಘಟನೆಗೆ ಕಾರಣ ತಿಳಿಸುವಂತೆ ಕದಂಬ ಬಸ್ ಚಾಲಕರಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು. ಡೀಸೆಲ್ ತುಂಬಿಸಿಕೊಳ್ಳದೆಯೇ ಹಾಗೆಯೇ ಹೋದ ಚಾಲಕನ ವಿರುದ್ಧ ಕದಂಬ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಈ ಬೇಜವಾಬ್ದಾರಿ ಘಟನೆ ತಾಜಾ ಇರುವಾಗಲೇ ಕದಂಬ ಬಸ್ ಹಿಂಬದಿ ಟಾಯರ್‍ ಗಳು ಕಳಚಿದ ಘಟನೆ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು