ಕಾಶ್ಮೀರ: ಡಾ.ಬ್ರೋ ಕಾಶ್ಮೀರಕ್ಕೆ ಹೋಗಿ ಅಲ್ಲಿಯ ಮಂಜಿನಲ್ಲಿ ಸಿಕ್ಕಾಕಿಕೊಂಡಿರೋ ವಿಡಿಯೋ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ಶೇರ್ ಮಾಡಿಕೊಂಡಿದ್ದಾರೆ. ಮಂಜಿನಲ್ಲಿ ಮಂಗಾಟ ಎನ್ನುವ ಶೀರ್ಷಿಕೆ ಕೊಟ್ಟಿರುವ ಡಾ.ಬ್ರೋ ಮಂಜಿನಲ್ಲಿ ಹೋಗುವಾಗ ಅಲ್ಲಿಯ ವ್ಯಕ್ತಿಯೊಬ್ಬ ಕ್ಯಾಮೆರಾ ಬಂದ್ ಮಾಡುವಂತೆ ಆವಾಜ್ ಕೂಡ ಹಾಕಿದ್ದಾನೆ.
ಆದರೆ ಕರ್ನಾಟಕದವರಿಗೆ ಕಾಶ್ಮೀರ ತೋರಿಸಿಯೇ ತೋರಿಸುವೆ ಎಂದ ಡಾ.ಬ್ರೋ ಮಂಜಿನಲ್ಲಿಯೇ ಓಡಿ ಹೋಗಿದ್ದಾರೆ. ಆಗ ಕಾಲು ಸಿಕ್ಕಿಕೊಂಡು ಬಿದ್ದಿದ್ದಾರೆ. ಹಾಗೂ ಹೀಗೂ ಎದ್ದು ಮತ್ತೆ ಓಡಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಇಲ್ಲೇ ಹೂತು ಹೋಗುತ್ತಿದ್ದೆ ಎಂದಿದ್ದಾರೆ. ನಂತರ ಬದಾಮ್, ಕಾಜು, ಪಿಸ್ತಾ ಎಲ್ಲಾ ಮಿಕ್ಸ್ ಇರುವ ಕಾಶ್ಮೀರದ ಕಾವಾ ಹೀರಿ ಮತ್ತೆ ಮುಂದೆ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದೇ ವೇಳೆ, ಕಾಶ್ಮೀರದ ಐಸ್ ಗೋಪುರದಲ್ಲಿರುವ ರೆಸ್ಟೋರೆಂಟ್ಗೆ ಭೇಟಿ ಕೊಟ್ಟ ಗಗನ್ ಅಲ್ಲಿನ ಸೌಂದರ್ಯವನ್ನು ತೋರಿಸಿದ್ದಾರೆ. ಅಷ್ಟಕ್ಕೂ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಕಾಶ್ಮಿರದ ಜನತೆಯ ಮೇಲೆ ಆರ್ಟಿಕಲ್ 370 ಹೇರಿ ಅಲ್ಲಿಯ ಜನಜೀವನ ದುಸ್ತರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಆರ್ಟಿಕಲ್ ತೆಗೆದು ಹಾಕಿದ ಮೇಲೆ ಕಾಶ್ಮೀರದ ಸೌಂದರ್ಯವನ್ನು ಯಾರು ಬೇಕಾದರೂ ಸವಿಯುವ ಅವಕಾಶ ಸಿಕ್ಕಿದೆ. ಅಲ್ಲಿಯ ಚಿತ್ರಣವೇ ಬದಲಾಗಿದೆ.
ಭಯೋತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ನಿಂತಿದೆ. ಕಾಶ್ಮೀರ ಎಂಬ ಹೆಸರು ಕೇಳಿದರೆ ಭಯ ಪಡುತ್ತಿದ್ದ ಪ್ರವಾಸಿಗರು ಇದೇಗ ಯಾವುದೇ ಹೆದರಿಕೆ ಇಲ್ಲದೇ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರವಾಸಿಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿದ್ದು, ಸರ್ಕಾರದ ಬೊಕ್ಕಸ ಕೂಡ ತುಂಬುತ್ತಿದೆ.
Read More: