ದೆಹಲಿ: ದೆಹಲಿ ಸಚಿವೆ ಅತಿಶಿ ಅವರು ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಒಂದು ಹೇಳಿಕೆಯಿಂದಾಗಿ ಅವರ ವಿರುಧ್ದ ಬಿಜೆಪಿ ಮಾನ ನಷ್ಟಮೊಕದ್ದಮೆ ಹೂಡಿದೆ. ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಈ ಸೂಚನೆಗೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ಮಂಗಳವಾರ ದೆಹಲಿ ಸರ್ಕಾರದ ಸಚಿವ ಅತಿಶಿ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ಬಿಜೆಪಿಗೆ ಸೇರಲು ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿಗೆ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ.
ಈ ಹಿಂದೆ ಬಿಜೆಪಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದರು ಬಿಜೆಪಿಗೆ ಸೇರದಿದ್ದರೆ ಬಂಧಿಸುವುದಾಗಿ ಆಪ್ತ ವ್ಯಕ್ತಿಗಳ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಅತಿಶಿ ಆರೋಪಿಸಿದ್ದರು. ಇವರೊಂದಿಗೆ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರನ್ನು ಬಂಧಿಸಲಾಗುವುದು ಎನ್ನುವ ಬೆದರಿಕೆ ಬಂದಿರುವುದಾಗಿ ಹೇಳಿಕೊಂಡಿದ್ದರು.
ಹಾಗಾಗಿ ಇದಕ್ಕೆ ಪುರಾವೆ ನೀಡುವಂತೆ ಬಿಜೆಪಿ ಹೇಳಿತ್ತು ಆದರೆ ಇದುವರೆಗೆ ಯಾವುದೇ ಸಾಕ್ಷಿಗಳನ್ನು ಒಪ್ಪಿಸಿಲ್ಲ. ಇಂತಹ ಸುಳ್ಳು ಆರೋಪದಿಂದ ಬಿಜೆಪಿ ನಾಯಕರ ಪ್ರತಿಷ್ಠಗೆ ಅವಮಾನಿಸಿದಂತೆ ಹಾಗೂ ಅವರ ಚಿತ್ರಣವನ್ನು ಹಾಳುಮಾಡುತ್ತವೆ.ಆದ್ದರಿಂದ ಮಂಗಳವಾರ ರಾತ್ರಿ ಅತಿಶಿಗೆ ಮಾನನಷ್ಟ ನೋಟಿಸ್ ನೀಡಲಾಗಿದ್ದು, ಆರೋಪಗಳನ್ನು ಹಿಂಪಡೆದು ಸಾರ್ವಜನಿಕ ಕ್ಷಮೆಯಾಚಿಸುವಂತೆ ಕೇಳಿಕೊಳ್ಳಲಾಗಿದೆ.
ಇದೀಗ ಪಕ್ಷದ ಮುಖ್ಯಸ್ಥ ಪ್ರವೀಣ್ ಕಪೂರ್ ಅವರು ಅತಿಶಿ ಅವರಿಗೆ ನೊಟೀಸ್ ನೀಡಿದ್ದು ಕ್ಷಮೆಯಾಚಿಸುವಂತೆ ತಿಳಿಸಿದ್ದಾರೆ ಹಾಗೂ ಅದಕ್ಕಾಗಿ 15 ದಿವಸಗಳ ಕಾಲವಕಾಶ ಕೂಡ ನೀಡಿದ್ದಾರೆ. ಸ್ಪಂದಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.