ನವದೆಹಲಿ: ಗಾಜಾದಲ್ಲಿ ಸುಮಾರು 5,000 ಮಕ್ಕಳು ಸೇರಿದಂತೆ ಸುಮಾರು 10,000 ಜನರ ಸಾವಿನ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ಟೈನ್ನಲ್ಲಿನ ನರಮೇಧಕ್ಕೆ ಹಣಕಾಸು ಮತ್ತು ಬೆಂಬಲ ನೀಡುತ್ತಿರುವ “ಪ್ರಪಂಚದ ನಾಯಕರನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಪ್ಯಾಲೆಸ್ಟೈನ್ನಲ್ಲಿ ಸುಮಾರು 10,000 ನಾಗರಿಕರನ್ನು ಹತ್ಯೆ ಮಾಡಲಾಗಿದೆ, ಅದರಲ್ಲಿ ಸುಮಾರು 5000 ಮಕ್ಕಳು ಕೂಡ ಸೇರಿದ್ದಾರೆ. ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್ಗಳ ಮೇಲೆ ಬಾಂಬ್ ದಾಳಿ ಮಾಡಲಾಗಿದೆ, ನಿರಾಶ್ರಿತರ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಪ್ರಪಂಚದ ಬಲಿಷ್ಠ ನಾಯಕರು ಈ ನರಮೇಧಕ್ಕೆ ಸಹಕಾರ ಒದಗಿಸುತ್ತಿದ್ದಾರೆ ಎಂಬುದು ನನ್ನ ಮನಸ್ಸಿನ ವ್ಯಥೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.