News Karnataka Kannada
Saturday, April 27 2024
ದೆಹಲಿ

ವಿಮಾನದಲ್ಲಿ ಮಹಿಳಾ ಪ್ರಯಾಣಿಕೆಗೆ ಮೂರ್ಛೆ ರೋಗ: ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ ವೈದ್ಯರಿಗೆ ಪ್ರಶಂಸೆ

ಕೆನಡಾದ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ವಿಮಾನ ಟೇಕ್​ ಆಫ್ ಆಗುವುದಕ್ಕೂ ಮುನ್ನ ಕ್ಯಾಬಿನ್ ಡೋರ್​ನಿಂದ ಜಿಗಿದಿರುವ ಘಟನೆ​ ಸಂಭವಿಸಿದೆ.
Photo Credit : News Kannada

ನವದೆಹಲಿ: ವಿಮಾನ ಪ್ರಯಾಣ ವೇಳೆ ಅನಾರೋಗ್ಯ ಉಂಟಾಗುವ ಹಲವು ಪ್ರಕರಣಗಳು ನಡೆಯುತ್ತಿರುತ್ತಿವೆ. ಅದೇ ರೀತಿ ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕೆಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.

ಬೆಂಗಳೂರು ಮೂಲದ ಡಾ. ಸುಂದರ್ ಶಂಕರನ್ ಅವರ ತ್ವರಿತ ಮತ್ತು ಪರಿಣಾಮಕಾರಿ ಮಧ್ಯಸ್ಥಿಕೆಯಿಂದಾಗಿ ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅಪಾಯಕ್ಕೆ ಸಿಲುಕಿದ್ದ ಮಹಿಳೆಯ ಜೀವ ಉಳಿದಿದೆ. ಈ ಕುರಿತಂತೆ ಸ್ವತಃ ವೈದ್ಯ ಡಾ. ಸುಂದರ್ ಶಂಕರನ್ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಸಂದರ್ಭಕ್ಕೆ ಸರಿಯಾಗಿ ಮಹಿಳೆಗೆ ಚಿಕಿತ್ಸೆ ನೀಡಿದ್ದರಿಂದ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ನನಗೆ ಏರ್ ಇಂಡಿಯಾ ಮೂಲಕ ದೆಹಲಿಯಿಂದ ಟೊರೊಂಟೊಗೆ ಹೋಗುವ ದಾರಿಯಲ್ಲಿ ನಾನು ಮತ್ತು ಟೊರೊಂಟೊದ ವಿಕಿರಣಶಾಸ್ತ್ರಜ್ಞ ಸತೀಶ್ ರವರು ಮೂರ್ಛೆ ರೋಗ ಹೊಂದಿದ್ದ ಮಧ್ಯವಯಸ್ಕ ಮಹಿಳೆಗೆ ಚಿಕಿತ್ಸೆ ನೀಡಲು ಕರೆದರು. ವಿಮಾನವು ಇನ್ನೂ ಟೇಕ್ ಆಫ್ ಆಗಿರಲಿಲ್ಲ ಮತ್ತು ಅದೃಷ್ಟವಶಾತ್ ಆಕೆಯ ಅಂಗಾಗಗಳು ಸ್ಥಿರವಾಗಿದ್ದವು ಮತ್ತು ಸ್ಥಳೀಯ ವೈದ್ಯರ ಸಹಾಯದಿಂದ ನಾವು ಆಕೆಯನ್ನು ವಿಮಾನದ ಸಿಬ್ಬಂದಿಗಳ ನೆರವಿನಿಂದ ವಿಮಾನದಿಂದ ಕೆಳಗಿಳಿಸಲಾಯಿತು. ಏರ್ ಇಂಡಿಯಾ ಸಿಬ್ಬಂದಿಗಳು ತುಂಬಾ ಸಹಕಾರಿ ಮತ್ತು ವೃತ್ತಿಪರರಾಗಿದ್ದರು ಭದ್ರತಾ ಕಾಳಜಿಯಿಂದಾಗಿ ಇಡೀ ವಿಮಾನವು ಭದ್ರತಾ ತಪಾಸಣೆಗೆ ಒಳಗಾಯಿತು ಮತ್ತು ಕ್ಲಿಯರೆನ್ಸ್ ಮತ್ತು ಹಾರಾಟವು ಒಂದು ಗಂಟೆ ವಿಳಂಬವಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು