ಹೊಸದಿಲ್ಲಿ: ಸಂಸದರ ಸಹಿ ನಕಲಿ ಮಾಡಿದ ಆರೋಪದಲ್ಲಿಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾನು ಇಂದು ರಾಜ್ಯಸಭೆಯಿಂದ ಅಮಾನತುಗೊಂಡಿದ್ದೇನೆ. ನಾನು ಸಂಸತ್ತಿನಲ್ಲಿ ನಿಂತು ವಿಶ್ವದ ಅತಿದೊಡ್ಡ ಪಕ್ಷದ ಹಿರಿಯ ನಾಯಕರಿಗೆ ಪ್ರಶ್ನೆಗಳನ್ನು ಕೇಳಿದ್ದೇನೆ. ದೆಹಲಿ ಸೇವಾ ಮಸೂದೆ ಕುರಿತು ಮಾತನಾಡುವಾಗ ಬಿಜೆಪಿಯ ದೊಡ್ಡ ನಾಯಕರ ಬಳಿ ನ್ಯಾಯ ಕೇಳಿದ್ದುಅಪರಾಧವೇ ಎಂದು ಚಡ್ಡಾ ಪ್ರಶ್ನಿಸಿದ್ದಾರೆ.