News Karnataka Kannada
Saturday, May 18 2024
ದೆಹಲಿ

ಅದಾನಿ ಸಂಧಾನಕಾರರಾಗಿ ಇಬ್ಬರು ಸಂಸದರು ಸಂಪರ್ಕಿಸಿದ್ದರು: ಸಂಸದೆ ಮಹುವಾ ಮೊಯಿತ್ರಾ

Photo Credit : News Kannada

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಬಗ್ಗೆ ಬಹುದೊಡ್ಡ ಆರೋಪವೊಂದು ಕೇಳಿಬಂದಿತ್ತು. ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.

ಇದೀಗ ಆ ಆರೋಪವನ್ನು ಸಂಸದೆ ಮಹುವಾ ಮೊಯಿತ್ರಾ ತಳ್ಳಿ ಹಾಕಿದ್ದು, ಪ್ರಶ್ನೆ ಕೇಳುವುದಕ್ಕೆ “ಹಣ” ನೀಡುವ ಬದಲು “ಪ್ರಶ್ನೆ ಮಾಡದಿರಲು ಹಣ ನೀಡಲು ಬಂದಿದ್ದರು ಎಂದು ಹೇಳಿದ್ದಾರೆ. ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಧಾನಕಾರರಾಗಿ ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಸಂಸದರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ.

“ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಲೋಕಸಭಾ ಸಂಸದರ ಮೂಲಕ ಅದಾನಿ ಅವರು ನನ್ನನ್ನು ಸಂಪರ್ಕಿಸಿದ್ದು, ಕುಳಿತು ಮಾತನಾಡಿ ಒಂದು ಒಪ್ಪಂದಕ್ಕೆ ಬರುವಂತೆ ಕೇಳಿಕೊಂಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ಅವರು ಪ್ರಶ್ನಿಸದಿರಲು ಹಣ ನೀಡಲು ಬಂದಿದ್ದರು ” ಎಂದು ಮಹುವಾ ಹೇಳಿದ್ದಾರೆ. ಆದರೆ ತಮ್ಮನ್ನು ಸಂಪರ್ಕಿಸಿದ ಸಂಸದರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

ಕಳೆದ ವಾರ ಸಹ ಚುನಾವಣೆ ಮುಗಿಯುವವರೆಗೆ, ಆರು ತಿಂಗಳ ಕಾಲ ಮೌನವಾಗಿರುವಂತೆ ನನಗೆ ಸಂದೇಶ ಕಳುಹಿಸಿದ್ದಾರೆ ಎಂದು ಟಿಎಂಸಿ ಸಂಸದೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು