News Karnataka Kannada
Wednesday, May 08 2024
ದೆಹಲಿ

ದೇವನೊಬ್ಬನೇ ಆತನ ಆರಾಧನಾ ವಿಧಾನ ಬೇರೆ ಬೇರೆ: ಮೋಹನ್‌ ಭಾಗವತ್‌

Only God is his way of worship: Mohan Bhagwat
Photo Credit : News Kannada

ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಕೋಮು ಸೌಹಾರ್ದತೆ ಪರ ಮಾತನಾಡಿದ್ದು, ಭಾರತವು ಒಬ್ಬ ದೇವರಿದ್ದಾನೆ ಆದರೆ ಆತನನ್ನು ಪಡೆಯಲು ವಿಭಿನ್ನ ಮಾರ್ಗಗಳಿವೆ ಎಂಬ ಸಂದೇಶವನ್ನು ಭಾರತ ಜಗತ್ತಿಗೆ ನೀಡಲಿದೆ ಎಂದು ಹೇಳಿದ್ದಾರೆ.

ಆಧ್ಯಾತ್ಮಿಕ ಸತ್ಯವನ್ನು ಅರಿತುಕೊಳ್ಳಲು ವಿವಿಧ ಮಾರ್ಗಗಗಳನ್ನು ಅನುಸರಿದ ಕುರಿತು ವೇದಗಳನ್ನು ಉದಾಹರಿಸಿ ವಿವರಿಸಿದರು. ಸಂಘರ್ಷಗಳ ಈ ಸಮಯದಲ್ಲಿ ಜಗತ್ತಿಗೆ ಈ ತಿಳುವಳಿಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

“ಸಂವೇದ” ದ ಹಿಂದಿ ಮತ್ತು ಉರ್ದು ಭಾಷಾಂತರಗಳನ್ನುಬಿಡುಗಡೆ ಮಾಡಿದ ನಂತರ ಈ ಕುರಿತು ಮಾತನಾಡಿದರು. ಒಂದೇ ಸತ್ಯವನ್ನು ವಿಭಿನ್ನ ಜನರು ವಿಭಿನ್ನವಾಗಿ ಗ್ರಹಿಸಬಹುದು ಎಂದು ಭಾಗವತ್ ಹೇಳಿದರು.

ಈ ಬಗ್ಗೆ ದೃಷ್ಟಾವೊಂದನ್ನು ವಿವರಿಸಿದ ಭಾಗವತ್‌ ವಿವಿಧ ವ್ಯಕ್ತಿಗಳು ವಿವಿಧ ಮಾರ್ಗಗಳನ್ನು ಬಳಸಿಕೊಂಡು ಪರ್ವತದ ತುದಿಯನ್ನು ತಲುಪಬಹುದು ಎಂದು ಹೇಳಿದರು.

ವೇದಗಳ ಉರ್ದು ಭಾಷಾಂತರವನ್ನು ಚಲನಚಿತ್ರ ಬರಹಗಾರ ಮತ್ತು ನಿರ್ದೇಶಕ ಇಕ್ಬಾಲ್ ದುರಾನಿ ಮಾಡಿದ್ದಾರೆ. ಆ ಪುಸ್ತಕ ಬಿಡುಗಡೆ ಸಂದರ್ಭ ಭಾಗವತ್‌ ಮಾತನಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು