News Karnataka Kannada
Monday, April 29 2024
ದೆಹಲಿ

‘ಪ್ರಜಾಪ್ರಭುತ್ವದ ಮಾತೆ’ಯ ಮೇಲಿನ ದಾಳಿ ನೆನಪು ಮಾಸಿಲ್ಲ: ಪ್ರಧಾನಿ

Congress is now a party run by urban Naxals: PM Modi
Photo Credit : IANS

ನವದೆಹಲಿ: ವಿಶೇಷ ಅಧಿವೇಶನದ ಮೊದಲ ದಿನದ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರಗಳ ಕುರಿತು ಉಲ್ಲೇಖಿಸಿದ್ದಾರೆ.

ಆರ್ಟಿಕಲ್ 370 ಮತ್ತು ಜಿಎಸ್‌ಟಿ, ‘ಪಿಂಚಣಿ’ ಮಸೂದೆಗಳ ಮೇಲಿನ ತಮ್ಮ ಸರ್ಕಾರದ ನಡೆಗಳನ್ನು ಉಲ್ಲೇಖಿಸಿದರು. ಅಲ್ಲದೆ ಸಂಸತ್ತಿನ ಮೇಲೆ 2001 ರ ಭಯೋತ್ಪಾದಕ ದಾಳಿ ಸೇರಿದಂತೆ ಹಳೆಯ ಕಟ್ಟಡಕ್ಕೆ ಸಂಬಂಧಿಸಿದ “ಕಹಿ-ಸಿಹಿ ನೆನಪುಗಳನ್ನು” ಪ್ರಧಾನಿ ನೆನಪಿಸಿಕೊಂಡರು.

ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ…ಅದಕ್ಕೆ ಸಂಬಂಧಿಸಿದ ಅನೇಕ ಕಹಿ-ಸಿಹಿ ನೆನಪುಗಳಿವೆ. ಈ ಕಟ್ಟಡದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳ ಬಗ್ಗೆ ಹಲವು ಚರ್ಚೆ ನಡೆಸಿದ್ದೇವೆ. ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ಕಟ್ಟಡದ ಮೇಲಿನ ದಾಳಿಯಲ್ಲ. ಒಂದು ರೀತಿಯಲ್ಲಿ’ಪ್ರಜಾಪ್ರಭುತ್ವದ ಮಾತೆ’ ಮೇಲೆ ನಡೆದ ದಾಳಿಯಂತಿದೆ ಎಂದರು.

ಇದೇ ವೇಳೆ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಜಿ 20 ನಾಯಕರು ಮತ್ತು ವಿದೇಶಿ ಅಧಿಕಾರಿಗಳಿಗೆ ಹಸ್ತಾಂತರಿಸಿದ ವಸ್ತುಗಳಲ್ಲಿ ಭಾರತವನ್ನು ‘ಪ್ರಜಾಪ್ರಭುತ್ವದ ತಾಯಿ’ ಎಂದು ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು. ಹೆಚ್ಚಿನ ಇತಿಹಾಸಕಾರರು ಗ್ರೀಸ್‌ ಅನ್ನು ಪ್ರಜಾಪ್ರಭುತ್ವದ ಗ್ರೀಕ್‌ ರಾಜಧಾನಿ ಅಥೆನ್ಸ್‌ ಎಂದು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು