ಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ರಾಣಿ ಚನ್ನಮ್ಮ ಈದ್ದಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ, ಇಂದು ಮೈದಾನ ಶುದ್ದಿ ಮಾಡಿ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಬಿಜೆಪಿ ಕಾರ್ಯಕರ್ತರು ಅಂತರಗಂಬ ಪೂಜೆ ಮಾಡಿದರು.
ಇನ್ನು ಕೇಸರಿ ಭಗವಾ ಧ್ವಜ ಇಟ್ಟು ಪೂಜೆ ಬಳಿಕ, ಗಣೇಶ ಮಂಟಪ ಹಾಕುವ ಕಾರ್ಯ ಆರಂಭ ಮಾಡಿದರು. ಕೊನೆ ಕ್ಷಣದಲ್ಲಿ ಪೂಜೆಗೆ ಅನುಮತಿ ಕೊಟ್ಟ ಮಹಾನಗರ ಪಾಲಿಕೆ. ಈ ಪೂಜೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಉತ್ಸವ ಸಮಿತಿ ಅಧ್ಯಕ್ಷ ಸಂಜು ಬಡಾಸ್ಕ ಸೇರಿದಂತೆ ಹಿಂದೂಪರ ಸಂಘಟನೆ ಮುಖಂಡರು, ಆರ್ಸ್ಎಸ್ ಮುಖಂಡರು ಭಾಗಿಯಾಗಿದ್ದರು.