ನವದೆಹಲಿ: ನಾಳೆ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ 11 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಳೆದ ತಿಂಗಳು ಚಳಿಗಾಲದ ಅಧಿವೇಶನದ ವೇಳೆ 146 ಸಂಸದರನ್ನ ಅಮಾನತುಗೊಳಿಸಲಾಗಿತ್ತು. 146 ಸಂಸದರಲ್ಲಿ 132 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತುಗೊಳಿಸಲಾಗಿದೆ. ಆದ್ದರಿಂದ ಎರಡೂ ಸದನಗಳನ್ನು ಮುಂದೂಡಿದಾಗ, ಅವರ ಅಮಾನತು ಹಿಂತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ 14 ಸಂಸದರನ್ನು – ರಾಜ್ಯಸಭೆಯ 11 ಮತ್ತು ಲೋಕಸಭೆಯ ಮೂವರು – ಹಕ್ಕುಬಾಧ್ಯತಾ ಸಮಿತಿಗಳು ತಮ್ಮ ವಿಷಯವನ್ನು ನಿರ್ಧರಿಸುವವರೆಗೆ ಅಮಾನತುಗೊಳಿಸಲಾಗಿದೆ.