News Karnataka Kannada
Monday, April 29 2024
ದೆಹಲಿ

ಮಾನವೀಯತೆ ಮೆರೆದ ಭಾರತೀಯ ನೌಕಪಡೆ : ಕಡಲ್ಗಳ್ಳರಿಂದ ಪಾಕ್​ನ 23 ಜನರ ರಕ್ಷಣೆ

ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮೇಧಾ, ಇರಾನ್ ಮೀನುಗಾರಿಕಾ ಹಡಗಿನ ಅಲ್-ಕಂಬಾರ್‌ನಿಂದ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ.
Photo Credit : NewsKarnataka

ನವದೆಹಲಿ:  ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮೇಧಾ, ಇರಾನ್ ಮೀನುಗಾರಿಕಾ ಹಡಗಿನ ಅಲ್-ಕಂಬಾರ್‌ನಿಂದ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ.

ಹಡಗಿನಲ್ಲಿ ಸೊಮಾಲಿಯಾದ 9 ಕಡಲ್ಗಳ್ಳರಿದ್ದರು. ಹಡಗು ಯೆಮನ್‌ನ ಸೊಕೊಟ್ರಾ ದ್ವೀಪದ ನೈಋತ್ಯಕ್ಕೆ ಸುಮಾರು 166 ಕಿ.ಮೀ ದೂರಲ್ಲಿ ಪ್ರಯಾಣಿಸುವಾಗ ಹೈಜಾಕ್ ಮುನ್ಸೂಚನೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಎಚ್ಚರಗೊಂಡ ಭಾರತೀಯ ನೌಕಾಪಡೆ INS ಸುಮೇಧಾ ಮೂಲಕ ಇರಾನ್ ಹಡಗನ್ನು ನಿಲ್ಲಿಸಿದೆ.

ನೌಕಾಪಡೆ ತಂಡ 12 ಗಂಟೆ ಬಿರುಸಿನ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಶರಣಾಗುವಂತೆ ಒತ್ತಡ ಹಾಕಿದೆ. ಬಳಿಕ ಐಎನ್‌ಎಸ್ ತ್ರಿಶೂಲ್ ಸಹಾಯದಿಂದ ಅವರ ಹಡಗನ್ನು ದರೋಡೆಕೋರರಿಂದ ರಕ್ಷಣೆ ಮಾಡಿ 9 ಕಡಲ್ಗಳ್ಳರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.ಕಡಲ್ಗಳ್ಳರ ಸೊಕ್ಕು ಮುರಿದ ಭಾರತೀಯ ನೌಕಪಡೆ ಕಡಲ್ಗಳ್ಳರಿಂದ 23 ಪಾಕಿಸ್ತಾನದ ಪ್ರಜೆಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು