ದೆಹಲಿ: ದೇಶದ ಕೆಲವೆಡೆ ಸಿಎಎ ಕುರಿತು ವಿರೋಧ ವ್ಯಕ್ತವಾಗಿದ್ದರೆ ಇನ್ನು ಕೆಲೆವೆಡೆ ಸಂತಸ ವ್ಯಕ್ತವಾಗಿದೆ. ದೆಹಲಿಯಲ್ಲಿ ಬಂದು ನೆಲೆಸಿರು ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ನೆನ್ನೆ ಅಂದರೆ ಸೋಮವಾರ ಸಿಎಎ ಜಾರಿ ಸುದ್ದಿ ಕೇಳಿ ಸಂತಸ ವ್ಯಕ್ತ ಪಡಿಸಿದ್ದಾರೆ ಆದರೆ ಕೇರಳ ರಾಜ್ಯದ ಸಿಎಂ ಪಿಣರಾಯಿ ವಿಜಯನ್ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಒಂದೆಡೆ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ಕೊನೆಗೂ ಭಾರತೀಯರಾಗುವ ಅವಕಾಶ ಸಿಕ್ಕಿತು ಎಂದು ಹರ್ಷವ್ಯಕ್ತಪಡಿಸಿದರೆ ಇನ್ನೊಂದೆಡೆ ಬಾಂಗ್ಲ ದಿಂದ ಬಂದು ನೆಲೆಸಿರುವ ಮತುವಾ ಸಮುದಾಯದ ಜನರು ಸೋಮವಾರ ಸಿಎಎ ಕಾಯ್ದೆ ಜಾರಿ ಸುದ್ದಿ ಕೇಳಿ ನಮಗೆ ಮತ್ತೊಮ್ಮೆ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ಸಂಭ್ರಮಿಸಿದ್ದಾರೆ.
ಪೌರತ್ವ ತಿದ್ದುಪಡಿ 2019ಕಾಯ್ದೆಯನ್ನು ಜಾರಿ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರ ವಿರೋಧ ವ್ಯಕ್ತ ಪಡಿಸಿದೆ. ಕೇಂದ್ರ ಸರ್ಕಾರ ಚುನಾವಣೆ ಸಮಯದಲ್ಲಿ ಬೇಕೆಂದೆ ಇಂತಹ ಕರ್ಯಕ್ಕೆ ಕೈ ಹಾಕಿದೆ. ಈ ಸಿಎಎ ಕಾಯ್ದೆ ಜನರನ್ನು ಜಾತಿ ಧರ್ಮ ಆದಾರದ ಮೇಲೆ ಭಾಗ ಮಾಡುತ್ತದೆ ಆದರೆ ಕೇರಳ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲು ಅವಕಾಶ ಇಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ವಿರೋಧ ವ್ಯಕ್ತಪಡಿಸಿದ್ದಾರೆ.