ದೆಹಲಿ: ಇಂದು ಪ್ರಧಾನಿ ಮೋದಿ ಅವರು 106ನೇ ಮನ್ಕಿ ಬಾತ್ನಲ್ಲಿ ದೇಶದ ಜನತೆಯನ್ನು ಉದ್ಧೇಶಿಸಿ ಮಾತನಾಡಿದರು. ʼನೀವು ದೇಶದಲ್ಲಿ ಎಲ್ಲೇ ಪ್ರವಾಸಕ್ಕೆ ಹೋದರೂ, ಉಳಿದ ಹಣದಲ್ಲಿ ಅಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಿರುವ ವಸ್ತುಗಳನ್ನು ಖರೀದಿ ಮಾಡುವುದನ್ನು ರೂಢಿಸಿಕೊಳ್ಳಿ ಎಂದಿದ್ದಾರೆ.
ಕೇವಲ ಹಬ್ಬದ ದಿನಗಳಲ್ಲಿ ಸ್ಥಳೀಯವಾಗಿ ತಯಾರಿಸಿರುವ ದೀಪವನ್ನು ಖರೀದಿ ಮಾಡಿ ಸುಮ್ಮನಾಗುವುದಲ್ಲ, ಸಣ್ಣ ಸಣ್ಣ ಅಂಗಡಿಗಳು ಮಾತ್ರವಲ್ಲ ಇಡೀ ದೇಶವೇ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ಬ ಆಗಿದ್ದು, ದೇಶದಲ್ಲೇ ತಯಾರಿಸಿರುವ ವಸ್ತುಗಳನ್ನು ಖರೀದಿ ಮಾಡುವ ಮೂಲಕ ದೇಶದ ಜನತೆಯ ಬೆವರು, ಯುವಕರ ಟಾಲೆಂಟ್ಗೆ ಗೌರವ ನೀಡಬೇಕು. ವೋಲಕ್ ಫಾರ್ ಲೋಕಲ್ ಜತೆ, ಆತ್ಮನಿರ್ಭರ ಭಾರತವು ಕೂಡ ಮುಖ್ಯ , ಹಾಗೆಯೇ ಏನೇ ಖರೀದಿ ಮಾಡಿದರೂ ಹಣವನ್ನು ಯುಪಿಐ ಮೂಲಕವೇ ನೀಡಿ ಎಂದು ಸಲಹೆ ನೀಡಿದರು.
ಗಾಂಧಿ ಜಯಂತಿಯಂದು ದೆಹಲಿಯಲ್ಲಿ ದಾಖಲೆಯ ಖಾದಿ ಮಾರಾಟವಾಗಿದೆ, ಕನ್ನಾಟ್ ಪ್ಲೇಸ್ನಲ್ಲಿರುವ ಒಂದೇ ಖಾದಿ ಅಂಗಡಿಯಿಂದ ಜನರು ಒಂದೇ ದಿನದಲ್ಲಿ 1.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ. ಖಾದಿ ಮಹೋತ್ಸವ ಮತ್ತೊಮ್ಮೆ ತನ್ನ ಹಳೆಯ ಮಾರಾಟ ದಾಖಲೆಗಳನ್ನೆಲ್ಲ ಮುರಿದಿದೆ ಎಂದು ಹೇಳಿದರು.