ನವದೆಹಲಿ: ಪ್ರವಾದಿ ಮಹಮ್ಮದ್ ಅವರ ಬಗೆಗಿನ ವಿವಾದಿತ ಹೇಳಿಕೆಯಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾ ಹಲವು ತಿಂಗಳುಗಳ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಾಶ್ಮೀರ ಫೈಲ್ಸ್ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಹೋತ್ರಿ ಅವರ ಮುಂದಿನ ಸಿನಿಮಾ ‘ದ ವ್ಯಾಕ್ಸಿನ್ ವಾರ್’ನ ಪ್ರಮೋಷನ್ ದೆಹಲಿಯಲ್ಲಿ ಕಳೆದ ದಿನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶರ್ಮಾ, ಸಿನಿಮಾ ತಂಡದವರಿಗೆ, ನಿರ್ಮಾಪಕರಿಗೆ ಹಾಗೂ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ವ್ಯಾಕ್ಸಿನ್ ಕಂಡು ಹಿಡಿದ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದರು. ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಿಮ್ಮ ಪ್ರಯತ್ನದಿಂದಾಗಿ ನಾವು ಭಾರತೀಯರು ಇಂದು ಜೀವಂತವಾಗಿದ್ದೇವೆ ಎಂದು ನೂಪುರ್ ಹೇಳಿದರು.
ಅಲ್ಲದೇ ತಮ್ಮನ್ನು ಈ ಕಾರ್ಯಕ್ರಮಕ್ಕೆ ಆಯೋಜಿಸಿದ್ದ ಸಿನಿಮಾ ಸಂಘಟಕರಿಗೂ ಧನ್ಯವಾದ ತಿಳಿಸಿದ ಅವರು ನಾನು ಸರಳವಾಗಿ ʼಭಾರತ್ ಮಾತಾ ಕಿ ಜೈʼ ಎಂದಷ್ಟೇ ಹೇಳಬಲ್ಲೆ ಎಂದರು. ಮೊದಲಿಗೆ ಇಂಡಿಯಾ ಇದನ್ನು ಮಾಡಲಿದೆ ಎಂದ ಅವರು ಕೂಡಲೇ ಇಂಡಿಯಾ ಬದಲು ಭಾರತ ಈ ಸಾಧನೆ ಮಾಡಲಿದೆ ಎಂದರು.
Thank you #NupurSharma for being such an inspiration for young girls. Nobody can stop you when you have millions of brothers fighting for you. pic.twitter.com/QlG6922BPW
— Vivek Ranjan Agnihotri (@vivekagnihotri) September 25, 2023