ನವದೆಹಲಿ: ಸೂರತ್ ನ್ಯಾಯಾಲಯದಿಂದ ದೋಷಿ ಎಂದು ತೀರ್ಪು ನೀಡಿದ ನಂತರ ರಾಹುಲ್ ಗಾಂಧಿ ಅವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ” ಸತ್ಯವೇ ನನ್ನ ಧರ್ಮ” ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿ, ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, “ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ, ಸತ್ಯವೇ ನನ್ನ ದೇವರು, ಮತ್ತು ಅದನ್ನು ಸಾಧಿಸಲು ಅಹಿಂಸೆ ಒಂದು ಮಾರ್ಗವಾಗಿದೆ” ಎಂದು ರಾಹುಲ್ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ (ಹಿಂದಿಯಲ್ಲಿ) ಟ್ವೀಟ್ ಮಾಡಿದ್ದಾರೆ ಮತ್ತು “ಭಯಭೀತ ಶಕ್ತಿಗಳು ರಾಹುಲ್ ಗಾಂಧಿಯವರ ಧ್ವನಿಯನ್ನು ತಗ್ಗಿಸಲು ಎಲ್ಲಾ ವಿಧಾನಗಳನ್ನು ಬಳಸುತ್ತಿವೆ, ಆದರೆ ನನ್ನ ಸಹೋದರ ಎಂದಿಗೂ ಹೆದರುವುದಿಲ್ಲ. ನಾವು ಸತ್ಯವನ್ನು ಮಾತನಾಡುತ್ತಲೇ ಬದುಕಿದ್ದೇವೆ ಮತ್ತು ಯಾವಾಗಲೂ ಸತ್ಯವನ್ನು ಮಾತನಾಡುತ್ತೇವೆ ಮತ್ತು ರಾಷ್ಟ್ರಕ್ಕಾಗಿ ಧ್ವನಿ ಎತ್ತುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಗುರುವಾರ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ 499 ಮತ್ತು 500 ರ ಅಡಿಯಲ್ಲಿ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ.