ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ಸೆರಯಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯವು ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆಯ ಪರ ವಾದ ಮಂಡಿಸಿದ ವಕೀಲರು, ಈ ಹಂತದಲ್ಲಿ ಸಿಸೋಡಿಯಾ ಅವರನ್ನು ವಶಕ್ಕೆ ಪಡೆಯುವುದು ಅಗತ್ಯವಿಲ್ಲ. ಮುಂದೆ ಅಗತ್ಯ ಬೀಳಬಹುದು ಎಂದರು.
ಜೈಲಿನೊಳಗೆ ಕನ್ನಡಕ, ಭಗವದ್ಗೀತೆ, ಡೈರಿ ಮತ್ತು ಪೆನ್ನು ಬೇಕೆಂದು ಕೋರಿ ಸಿಸೋಡಿಯಾ ಅರ್ಜಿ ಸಲ್ಲಿಸಿದ್ದು, ಸೋಮವಾರ ನ್ಯಾಯಾಲಯವೂ ಅದಕ್ಕೆ ಅನುಮತಿ ನೀಡಿದೆ. ಎಎಪಿ ನಾಯಕರು ಬಂಧನ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಇದರಿಂದ ಸಾಕ್ಷಿಗಳು “ಭಯಭೀತರಾಗಿದ್ದಾರೆ” ಎಂದು ಕೇಂದ್ರೀಯ ಸಂಸ್ಥೆಯ ಪರವಾಗಿ ಹಾಜರಾದ ವಕೀಲರು ವಾದಿಸಿದರು.