ಹೊಸದಿಲ್ಲಿ: ಆದಿವಾಸಿಗಳ ಕಲ್ಯಾಣ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನಮ್ಮ ಸರ್ಕಾರವು ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವಾಲಯವು ಆಯೋಜಿಸಿರುವ ಬುಡಕಟ್ಟು ಕಲೆ, ಪಾಕಪದ್ಧತಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ 10 ದಿನಗಳ ಉತ್ಸವ ‘ಆದಿ ಮಹೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಆದಿ ಮಹೋತ್ಸವದಂತಹ ಕಾರ್ಯಕ್ರಮಗಳು ದೇಶದಲ್ಲಿ ಒಂದು ಆಂದೋಲನವಾಗಿ ಮಾರ್ಪಟ್ಟಿವೆ ಎಂದರು. ಬುಡಕಟ್ಟು ಸಮಾಜದ ಕಲ್ಯಾಣವು ನನ್ನ ವೈಯಕ್ತಿಕ ಸಂಬಂಧ ಮತ್ತು ಭಾವನೆಗಳ ವಿಷಯ ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮಾಜದ ಕೊಡುಗೆಗಳನ್ನು ಒತ್ತಿ ಹೇಳಿದ ಮೋದಿ, ಬುಡಕಟ್ಟು ಸಮುದಾಯದ ತ್ಯಾಗ ಮತ್ತು ಶೌರ್ಯದ ಅದ್ಭುತ ಅಧ್ಯಾಯವನ್ನು ದಶಕಗಳಿಂದ ಮುಚ್ಚಿಡಲಾಗಿತ್ತು ಎಂದರು. ಬುಡಕಟ್ಟು ಯುವಕರಿಗೆ ಬುಡಕಟ್ಟು ಕಲೆಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನಗಳ ಬಗ್ಗೆ ಪ್ರಧಾನ ಮಂತ್ರಿ ಒತ್ತಿ ಹೇಳಿದರು.