News Karnataka Kannada
Sunday, May 05 2024
ದೆಹಲಿ

ಕೇಂದ್ರ ಸರ್ಕಾರದಿಂದ ಆದಿವಾಸಿಗಳ ಕಲ್ಯಾಣ: ಆದಿ ಮಹೋತ್ಸವದಲ್ಲಿ ಪ್ರಧಾನಿ

Modi Todya
Photo Credit : IANS

ಹೊಸದಿಲ್ಲಿ: ಆದಿವಾಸಿಗಳ ಕಲ್ಯಾಣ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನಮ್ಮ ಸರ್ಕಾರವು ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವಾಲಯವು ಆಯೋಜಿಸಿರುವ ಬುಡಕಟ್ಟು ಕಲೆ, ಪಾಕಪದ್ಧತಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ 10 ದಿನಗಳ ಉತ್ಸವ ‘ಆದಿ ಮಹೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಆದಿ ಮಹೋತ್ಸವದಂತಹ ಕಾರ್ಯಕ್ರಮಗಳು ದೇಶದಲ್ಲಿ ಒಂದು ಆಂದೋಲನವಾಗಿ ಮಾರ್ಪಟ್ಟಿವೆ ಎಂದರು. ಬುಡಕಟ್ಟು ಸಮಾಜದ ಕಲ್ಯಾಣವು ನನ್ನ ವೈಯಕ್ತಿಕ ಸಂಬಂಧ ಮತ್ತು ಭಾವನೆಗಳ ವಿಷಯ ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮಾಜದ ಕೊಡುಗೆಗಳನ್ನು ಒತ್ತಿ ಹೇಳಿದ ಮೋದಿ, ಬುಡಕಟ್ಟು ಸಮುದಾಯದ ತ್ಯಾಗ ಮತ್ತು ಶೌರ್ಯದ ಅದ್ಭುತ ಅಧ್ಯಾಯವನ್ನು ದಶಕಗಳಿಂದ ಮುಚ್ಚಿಡಲಾಗಿತ್ತು ಎಂದರು. ಬುಡಕಟ್ಟು ಯುವಕರಿಗೆ ಬುಡಕಟ್ಟು ಕಲೆಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನಗಳ ಬಗ್ಗೆ ಪ್ರಧಾನ ಮಂತ್ರಿ ಒತ್ತಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು