ನೇಪಾಳ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಈ ವರ್ಷ ನೇಪಾಳದ ಪಶುಪತಿ ದೇವಾಲಯದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಜೊತೆಗೆ ಮಹಾರಾಣಿ ತೃಷಿಕಾ ಒಡೆಯರ್ ಭಾಗಿಯಾಗಿ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದ್ದರು.
ನೆರೆ ರಾಷ್ಟ್ರವಾದ ನೇಪಾಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆದಿರೋದರಿಂದ ಮಹಾರಾಜ ದಂಪತಿ ನೇಪಾಳ ದರ್ಶನ ಕೂಡ ಮಾಡಿ ಬಂದಿದ್ದಾರೆ. ನೇಪಾಳದಲ್ಲಿ ಒಂದು ದಿನ ಎಂದು ಪೋಸ್ಟ್ ಹಾಕಿ, ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದ್ದಾರೆ.
ಕಾರ್ಯಕ್ರಮದ ಬಳಿಕ ರಾಜ-ರಾಣಿ ನೇಪಾಳದ ಪ್ರವಾಸಿ ತಾಣಗಳನ್ನು ಸಾಮಾನ್ಯ ಜನರಂತೆ ಬೀದಿ ಬೀದಿಯಲ್ಲಿ ಸುತ್ತುತ್ತಾ, ಎಂಜಾಯ್ ಮಾಡುತಿದ್ದಾರೆ. ರಾಜಕುಮಾರಿ ತ್ರಿಷಿಕಾದೇವಿ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರಿನ ಒಡೆಯ ದಂಪತಿ ಸಿಂಪಲ್ ಲುಕ್ ಮತ್ತು ಸರಳ ನಡೆಗೆ ಮನಸೋತಿರುವ ಅಭಿಮಾನಿಗಳು ನಿಮ್ಮ ಸರಳತೆಗೆ ಸಲಾಂ ಎಂದಿದ್ದಾರೆ. ಅಲ್ಲದೇ ನಮ್ಮ ಮಾಡರ್ನ್ ಯುಗದ ಮಹಾರಾಜ ಮತ್ತು ಮಹಾರಾಣಿ ಎಂದು ಕಾಮೆಂಟ್ ಮಾಡಿದ್ದಾರೆ.
https://www.instagram.com/p/C0MEKjYLzWL/?hl=en