ನವದೆಹಲಿ: ಕೆಲ ವಿಪಕ್ಷ ನಾಯಕರ ಐಫೋನ್ಗಳಿಗೆ ಬಂದ ಹ್ಯಾಕ್ ಎಚ್ಚರಿಕೆಯ ತನಿಖೆಗೆ ಸಹಕರಿಸಿ ಫೋನ್ಗಳನ್ನು ನೀಡುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೆಲ ವಿಪಕ್ಷ ನಾಯಕರ ಐಫೋನ್ಗಳಿಗೆ ಹ್ಯಾಕ್ ಎಚ್ಚರಿಕೆಯ ಸಂದೇಶಗಳು ಬಂದಿದ್ದವು. ಇದು ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳ ಕೆಲಸವೆಂದು ಕೆಲ ನಾಯಕರು ಆರೋಪಿಸಿದ್ದರು. ಶಿವಸೇನೆಯ ಯುಬಿಟಿ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನಿಸಿ, ಇದನ್ನು ಸಚಿವರ ಗಮನಕ್ಕೆ ತಂದರೂ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅಶ್ವಿನಿ ವೈಷ್ಣವ್, ʼಕೇವಲ ಆರೋಪ ಮಾಡುವ ಬದಲು ಕಾನೂನು ಪಾಲನಾ ಸಂಸ್ಥೆಗಳೊಂದಿಗೆ ಸಹಕರಿಸಿ, ತಮ್ಮ ಫೋನಿನಲ್ಲಿ ಸಮಸ್ಯೆ ಕಂಡುಬಂದಲ್ಲಿ ಸಿಇಆರ್ಟಿ-ಇನ್ ಸಂಸ್ಥೆಗೆ ನೀಡಿ ಪರೀಶೀಲಿಸಬಹುದುʼ ಎಂದು ಹೇಳಿದ್ದಾರೆ.