ದೆಹಲಿ: ಅಕ್ಟೋಬರ್ 14ರ ಇಂದು ಸಂಭವಿಸುವ ಗ್ರಹಣ ಈ ವರ್ಷದ ಎರಡನೇ ಸೂರ್ಯಗ್ರಹಣವಾಗಲಿದೆ ಮತ್ತು ವರ್ಷದ ಕೊನೆಯ ಸೂರ್ಯ ಗ್ರಹಣವಾಗಿದೆ. ಈ ಹಿಂದೆ 2023ರ ಏಪ್ರಿಲ್ 20ರಂದು ಸೂರ್ಯಗ್ರಹಣ ಸಂಭವಿಸಿತ್ತು. ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ದೃಷ್ಟಿಯಿಂದ ಗ್ರಹಣದ ಘಟನೆಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ನಂತರ, ದೇಶ ಮತ್ತು ಪ್ರಪಂಚದಲ್ಲಿ ನೈಸರ್ಗಿಕ ವಿಕೋಪದ ಸಾಧ್ಯತೆಯು ಹೆಚ್ಚಾಗಬಹುದು ಎನ್ನಲಾಗುತ್ತದೆ.
ಸೂರ್ಯ ಗ್ರಹಣದ ದಿನದಂದೇ ಸರ್ವಪಿತೃ ಅಮಾವಾಸ್ಯೆಯೂ ಇರುತ್ತದೆ. ಸರ್ವ ಪಿತೃ ಅಮಾವಾಸ್ಯೆಯೊಂದಿಗೆ, 16 ದಿನಗಳ ಶ್ರಾದ್ಧ ಪಕ್ಷವು ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಇದರಿಂದಾಗಿ ಶ್ರಾದ್ಧ ಆಚರಣೆಗಳು ಮತ್ತು ಅಮಾವಾಸ್ಯೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ನಿಷೇಧವಿರುವುದಿಲ್ಲ. ಪಂಚಾಂಗದ ಪ್ರಕಾರ, ಅ.14ರ ಈಮದು ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಅಶ್ವಿನ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತದೆ.
ಇಂದು ರಾತ್ರಿ 8:34 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಅ.15ರ ನಾಳೆ ಮಧ್ಯಾಹ್ನ 2:25 ಕ್ಕೆ ಕೊನೆಗೊಳ್ಳಲಿದೆ.